Advertisement

I.N.D.I.A: ಹೆಚ್ಚುತ್ತಿದೆ ಬಿರುಕು- ಪಂಜಾಬ್‌ ಬಳಿಕ ದಿಲ್ಲಿಯಲ್ಲೂ ಏಕಾಂಗಿ ಸ್ಪರ್ಧೆ: ಕೇಜ್ರಿ

12:28 AM Feb 12, 2024 | Team Udayavani |

ಹೊಸದಿಲ್ಲಿ: ಪಂಜಾಬ್‌, ಚಂಡೀಗಢದ 14 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿ ಸ್ಪರ್ಧೆ ಬಗ್ಗೆ ಘೋಷಿಸಿದ ಬೆನ್ನಲ್ಲೇ ಆಪ್‌ ಸಂಚಾಲಕ ಕೇಜ್ರಿವಾಲ್‌, ಈಗ ದಿಲ್ಲಿಯ 7 ಲೋಕಸಭಾ ಕ್ಷೇತ್ರಗಳ­ಲ್ಲಿಯೂ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಇದು ವಿಪಕ್ಷಗಳ ಇಂಡಿಯಾ ಒಕ್ಕೂಟವು ದಿನಕಳೆದಂತೆ ಶಕ್ತಿ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಯನ್ನು ಹುಟ್ಟುಹಾಕಿದೆ.

Advertisement

ರವಿವಾರ ಪಂಜಾಬ್‌ನ ತರಣ್‌ತಾರಣ್‌ನಲ್ಲಿ ಮಾತನಾಡಿದ ಅವರು, “ಎಲ್ಲ 7 ಕ್ಷೇತ್ರಗಳಲ್ಲಿ ಆಪ್‌ ಗೆಲ್ಲಬೇಕು ಎಂದು ದಿಲ್ಲಿ ಯ ಜನರು ಮನಸ್ಸು ಮಾಡಿದ್ದಾರೆ. ಪಂಜಾಬ್‌ನಲ್ಲಿ 13 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ ಗಳಿಸುವಂತೆ ಮಾಡ­ಬೇಕು. ಇದರಿಂದ ಪಂಜಾಬ್‌ ಸರಕಾ­ರದ ಶಕ್ತಿ ವರ್ಧನೆಯಾಗಲಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾ­ಗಿರುವ ತೆರಿಗೆ ಪಾಲನ್ನು ಕ್ಲಪ್ತವಾಗಿ ನೀಡಲಿದೆ’ ಎಂದಿದ್ದಾರೆ.

ದಿಲ್ಲಿ ಸೀಟು ಹಂಚಿಕೆ ಬಗ್ಗೆ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ಮಾತುಕತೆಗಳು ಪ್ರಗತಿಯಲ್ಲಿ ಇರುವಂತೆಯೇ ಕೇಜ್ರಿವಾಲ್‌ ಈ ಮಾತನಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್‌ 4 ಮತ್ತು ಆಪ್‌ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿತ್ತು.

ಇಂಡಿಯಾ ಒಕ್ಕೂಟ ಬಲಶಾಲಿ ಯಾಗಿದ್ದು, ಮೈತ್ರಿಕೂಟದ ಸದಸ್ಯ ಪಕ್ಷಗಳೆಲ್ಲವೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ಬಿಜೆಪಿಯು ತನಿಖಾ ಸಂಸ್ಥೆಗಳ ಮೂಲಕ ವಿಪಕ್ಷ ನಾಯಕರನ್ನು ಬೆದರಿಸಿ ಎನ್‌ಡಿಎ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ಒಂದಿ ಬ್ಬರು ಕೂಟ ತೊರೆದಲ್ಲಿ ನಷ್ಟವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next