Advertisement

ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಪಶ್ಚಾತ್ತಾಪವಿಲ್ಲ: ಕಾಳಿಚರಣ್

03:40 PM Apr 10, 2022 | Team Udayavani |

ಉಜ್ಜಯಿನಿ : ಮಹಾತ್ಮ ಗಾಂಧೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಡಿಸೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ ಋಷಿ ಕಾಳಿಚರಣ್ ಮಹಾರಾಜ್, ”ಬಾಪು ವಿರುದ್ಧ ತಾನು ನೀಡಿದ ಹೇಳಿಕೆಗೆ ಪಶ್ಚಾತ್ತಾಪವಿಲ್ಲ ಮತ್ತು ವಿಚಾರದಲ್ಲಿ ಬದಲಾವಣೆ ಇಲ್ಲ” ಎಂದು ಶನಿವಾರ ಹೇಳಿದ್ದಾರೆ.

Advertisement

“ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ಅದನ್ನು ಚಿಂತನಶೀಲವಾಗಿ ಹೇಳಿದೆ ಮತ್ತು ಯಾವುದೇ ವಿಷಾದವಿಲ್ಲ. ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ್ ಸಿಂಗ್ ಮಹಾರಾಜ್ ಮತ್ತು ರಾಣಾ ಪ್ರತಾಪ್ ಅವರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯನ್ನು ನಾನು ದ್ವೇಷಿಸುತ್ತೇನೆ ಮತ್ತು ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಕಾಳಿಚರಣ್ ಮಹಾರಾಜ್ ಸುದ್ದಿ ಸಂಸ್ಥೆ ಎಎನ್ ಐ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಡಿಸೆಂಬರ್ 30 ರಂದು ಛತ್ತೀಸ್‌ಗಢ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದರು. ಇತರರೊಂದಿಗೆ ಬಂಧನಕ್ಕೊಳಗಾದ ಧಾರ್ಮಿಕ ಮುಖಂಡನನ್ನು ಮಧ್ಯಪ್ರದೇಶದ ಖಜುರಾಹೊದಲ್ಲಿ ಬಂಧಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next