Advertisement

ಚಿಲ್ಲರೆ ಜನರಿಗೆ ನಾನು ಉತ್ತರ ಕೊಡುವುದಿಲ್ಲ: ಎಂಸಿಎಸ್‌

05:52 PM Apr 23, 2022 | Team Udayavani |

ಚಿಂತಾಮಣಿ: ತಾಲೂಕಿನ ಎಲ್ಲಾ ಇಲಾಖೆಗಳು ಜನರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಫ‌ಲವಾಗಿವೆ. ಈ ಕುರಿತು ಇಷ್ಟೂ ದಿನಗಳ ಕಾಲ ನಾನು ಮಾತನಾಡದೆ ನಿಶ್ಯಬ್ಧವಾಗಿದ್ದೆ, ಆದರೂ ನಮ್ಮ ಮಾತುಗಳಿಗೆ ಅವೈಜ್ಞಾನಿಕವಾಗಿ ಕೆಲವರು ಪ್ರತಿಕ್ರಿಯೆ ನೀಡುತ್ತಾರೆ. ಅಂತಹ ಚಿಲ್ಲರೆ ಜನರಿಗೆ ನಾನು ಉತ್ತರ ಕೊಡಲಾರೆ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಅಭಿಪ್ರಾಯಪಟ್ಟರು.

Advertisement

ಅವರು ನಗರದ ತಮ್ಮ ನಿವಾಸದಲ್ಲಿ ಮಲಿಕ್‌ ಮತ್ತು ದಾದಾಪೀರ್‌ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷವನ್ನು ತೊರೆದು ತಮ್ಮ ಬಣಕ್ಕೆ ಬಂದ ಹಲವು ಯುವಕರನ್ನು ಸ್ವಾಗತಿಸಿದರು. ಇನ್ನು ನಗರದಲ್ಲಿ ಹಲವು ದೂರುಗಳು ಬಂದಿವೆ. ಡ್ರಗ್ಸ್‌, ಮಾದಕ ವಸ್ತುಗಳು ನಗರದಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಯುವಲ್ಲಿ ಪೊಲೀಸ್‌ ಇಲಾಖೆ ಫ‌ಲವಾಗಿದೆ. ಇನ್ನಾದರೂ ಪೊಲೀಸರು ಕೃತ್ಯಗಳು ಜರುಗದಂತೆ ತಡೆಯಬೇಕು ಎಂದರು.

ತಾಲೂಕಿನಲ್ಲಿ ಇರುವ ವಿವಿಧ ಇಲಾಖೆಗಳಿಗೆ ಪ್ರಾಮಾಣಿಕ ಅಧಿಕಾರಿ ಗಳು ಬರುತ್ತಿಲ್ಲ. ಇಲ್ಲಿಗೆ ಬರುತ್ತಿರುವ ಅಧಿಕಾರಿಗಳು ಕೇವಲ ಹಣದ ಆಸೆಗೆ ಬರುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಜನಪರ ಕೆಲಸಗಳನ್ನು ಆಪೇಕ್ಷಿಸುವುದು ಹೇಗೆ. ನಗರ ಸೇರಿದಂತೆ ತಾಲೂಕಿನ ಸಮ ಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾ ಖೆಯ ಅಧಿಕಾರಿಗಳಿಗೆ ತಿಳಿಸಿದರೂ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಇನ್ನು ಶಾಸಕರು ತಾಲೂಕಿನ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ಚುನಾವಣೆಯ ಹಿಂದಿನ ದಿನ ಮಾತ್ರ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಉಳಿದಂತೆ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳತ್ತಿಲ್ಲ. ಅವರು 9 ವರ್ಷಗಳ ಶಾಸಕರಾಗಿ ಅವರ ಸಾಧನೆಗಳೇನು ಎಂಬುದನ್ನು ಅವರೇ ತಿಳಿಸಬೇಕು ಎಂದರು.

ಅವೈಜ್ಞಾನಿಕ ಕಾಮಗಾರಿಗಳಿಗೆ ಜನರ ಹಣ ಪೋಲು ಮಾಡುವುದು. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕವಾಗಿ ಜನರಿಗೆ ಸುಲಭಕ್ಕೆ ದೊರಕಿಸಬಹುದಾದ ಯೋಜನೆಗಳಿಗೆ ಕೋಟ್ಯಂತರ ರೂ. ವ್ಯಯಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಎಂಜಿ ರಸ್ತೆಯ ಅಗಲೀಕರಣಕ್ಕೆ ಅಂಗಡಿ ಮಾಲಿಕರಿಗೆ ನೋಟಿಸ್‌ ಕೊಟ್ಟು ಅಂಗಡಿಗಳಿಗೆ ಗುರುತು ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಪ್ರಾರಂಭದಲ್ಲಿಯೇ ಲೋಕೋಪಯೋಗಿ ಇಲಾಖೆ ಮತ್ತು ಅಂಗಡಿ ಮಾಲಿಕರ ನಡುವೆ ಮಾತುಕತೆ
ನಡೆದು ಕೆಲವು ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟಿದ್ದಾರೆ. ಆದರೂ ಅಂತವರಿಗೂ ನೋಟೀಸ್‌ ನೀಡಿದ್ದಾರೆ ಎಂದರು.

Advertisement

ಜೆಡಿಎಸ್‌ ಮುಖಂಡ ಮಲ್ಲಿಕ್‌ ಮತ್ತು ದಾದಾ ಪೀರ್‌ ನೇತೃತ್ವದಲ್ಲಿ ನಾಗೇಂದ್ರಕುಮಾರ್‌, ನವಾಬ್‌, ಫ‌ರ್ಹಾನ್‌, ತಾರ್‌, ಸಂದೀಪ್‌, ಚೋಟು ಸೇರಿದಂತೆ ಹಲವರು ಸೇರ್ಪಡೆಯಾದರು. ನಗರಸಭಾ ಸದಸ್ಯ ಎಂ.ಹರೀಶ್‌, ಮುಖಂಡ ಉಮೇಶ್‌, ಶೇಷಾರೆಡ್ಡಿ, ಅಮೂನ್‌ ಖಾನ್‌, ಮಹಬೂಬ್‌ ಸಾಬ್‌, ಇಂತಿಯಾಜ್‌ಪಾಶಾ, ಖಾದರ್‌ಸಾಬ್‌, ನವಾಬ್‌ ಸಾಬ್‌, ಸನ್ನೂಖಾನ್‌, ಅಬ್ದುಲ್‌ಸಮದ್‌, ಖೀಜರ್‌ ಪಾಶಾ, ನಾರಾಯಣಸ್ವಾಮಿ, ಎಜಾಜ್‌ಪಾಶಾ, ಸರ್ದಾರ್‌ ಪಾಷಾ, ಪರೂಕ್‌ ಅಹಮ್ಮದ್‌, ಚಿನ್ನಸಂದ್ರ ಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next