Advertisement

Lok Sabha polls ಶ್ರೀರಾಮುಲುಗೆ ಟಿಕೆಟ್‌ ನೀಡಬೇಡಿ ಎಂದು ನಾನು ಹೇಳಿಲ್ಲ: ಜನಾರ್ದನ ರೆಡ್ಡಿ

09:08 PM Mar 09, 2024 | Team Udayavani |

ಗಂಗಾವತಿ: ಲೋಕಸಭೆ ಚುನಾವಣೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ವರಿಷ್ಠ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

ಆನೆಗೊಂದಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಸೋಲುಂಟಾಗುತ್ತದೆ ಎಂಬುದು ಸರ್ವೇಯಲ್ಲಿ ಗೊತ್ತಾಗಿರಬಹುದು. ಹೀಗಾಗಿ ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಶ್ರೀರಾಮುಲುಗೆ ಟಿಕೆಟ್‌ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವೆ ಎನ್ನುವ ವಿಚಾರ ಸುಳ್ಳು. ಟಿಕೆಟ್‌ ನೀಡುವ ಬಗ್ಗೆ ಮಾತನಾಡಲು ನಾನು ಬಿಜೆಪಿಯ ರಾಜ್ಯಾಧ್ಯಕ್ಷನೂ ಅಲ್ಲ, ಆ ಪಕ್ಷದ ಕೋರ್‌ ಕಮಿಟಿ ಸದಸ್ಯನೂ ಅಲ್ಲ. ಶ್ರೀರಾಮುಲುಗೆ ಟಿಕೆಟ್‌ ನೀಡಿದರೆ ಅವರು ಸೋಲಬಹುದು ಎನ್ನುವ ಸರ್ವೇ ವರದಿ ಬಂದಿರಬಹುದು. ಅದಕ್ಕಾಗಿ ಟಿಕೆಟ್‌ ನೀಡಬಾರದು ಎನ್ನುವ ಲೆಕ್ಕಚಾರ ಬಿಜೆಪಿಯಲ್ಲಿ ಇರಬಹುದು ಎಂದು ಹೇಳಿದರು.

ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು 4 ಸ್ಥಾನಗಳನ್ನು ಕೇಳಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಅನಾವಶ್ಯಕವಾಗಿ ನನ್ನ ಹೆಸರು ಎಳೆದು ತರುತ್ತಿದ್ದಾರೆ. ಕೆಲ ನಾಯಕರು ತಮ್ಮ ಲಾಭಕ್ಕಾಗಿ ನನ್ನನ್ನು ವಿಲನ್‌ ಮಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next