Advertisement

ನಾನೊಬ್ಬನೆ ಪಾಕ್‌ಗೆ ತೆರಳಲಾರೆ:ಸರ್ಫ‌ರಾಜ್‌ಗೆ ಢವ..ಢವ

10:19 AM Jun 19, 2019 | Vishnu Das |

ಮ್ಯಾಂಚೆಸ್ಟರ್‌: ಮುಂದಿನ ಪಂದ್ಯಗಳಲ್ಲಿ ಎಚ್ಚೆತ್ತುಕೊಂಡು ಆಡದಿದ್ದರೆ ತವರಿನ ಅಭಿಮಾನಿಗಳನ್ನು ಎದುರಿಸುವುದು ಕಷ್ಟವಾಗಲಿದೆ. ನಾನೊಬ್ಬನೇ ಪಾಕಿಸ್ಥಾನಕ್ಕೆ ತೆರಳಲಾರೆ ಎಂದು ಪಾಕಿಸ್ಥಾನ ತಂಡದ ನಾಯಕ ಸರ್ಫ‌ರಾಜ್‌ ಅಹ್ಮದ್‌ ತಿಳಿಸಿದ್ದಾರೆ.

Advertisement

ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ಪಾಕಿಸ್ಥಾನ ಕ್ರಿಕೆಟ್‌ ಅಭಿಮಾನಿಗಳು ಸರ್ಫ‌ರಾಜ್‌ ಪಡೆ ವಿರುದ್ಧ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಮಾತನಾಡಿರುವ ಸರ್ಫ‌ರಾಜ್‌, “ಒಂದು ವೇಳೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿ ಮುಂದುವರಿದರೆ ನಾನೊಬ್ಬನೇ ತವರಿಗೆ ತೆರಳುತ್ತೇನೆ ಅಂದುಕೊಳ್ಳುವುದು ದೊಡ್ಡ ಹೆಡ್ಡತನವಾಗುತ್ತದೆ. ಭಾರತದ ವಿರುದ್ಧದ ಸೋಲನ್ನು ಮರೆಯಿರಿ. ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದರತ್ತ ಗಮನ ಕೊಡಿ’ ಎಂದು ತಮ್ಮ ತಂಡದ ಆಟಗಾರರಿಗೆ ಕರೆ ನೀಡಿದ್ದಾರೆ.

ಸದ್ಯ ಪಾಕ್‌ 5 ಪಂದ್ಯ ಆಡಿದ್ದು 3 ಅಂಕಗಳಿಸಲಷ್ಟೇ ಸಾಧ್ಯವಾಗಿದೆ. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮಾಜಿ ಪಾಕ್‌ ಕ್ರಿಕೆಟಿಗರಿಂದ ಸರ್ಫ‌ರಾಜ್‌ ಮಿದುಳಿಲ್ಲದ ನಾಯಕ ಎನ್ನುವ ಟೀಕೆಯೂ ಕೇಳಿ ಬಂದಿದೆ. ಕಾಫಿ ಡೇನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮೊದಲು ಪಾರ್ಟಿ ನಡೆಸಿದ್ದಾರೆ ಎನ್ನುವ ಆರೋಪ ಪಾಕ್‌ ವಿರುದ್ಧದ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next