Advertisement

Kerala;ನಾನು ರಬ್ಬರ್ ಸ್ಟಾಂಪ್ ಅಲ್ಲ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

09:46 PM Nov 30, 2023 | Vishnudas Patil |

ತಿರುವನಂತಪುರಂ: ನಾನು ರಬ್ಬರ್ ಸ್ಟಾಂಪ್ ಅಥವಾ ಎಲ್ಲದಕ್ಕೂ ಹೌದು ಅನ್ನುವ (ಎಸ್ ಮ್ಯಾನ್) ಅಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಗುರುವಾರ ಎಲ್ ಡಿ ಎಫ್ ಸರಕಾರದ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡುತ್ತೇನೆ. ಯಾವುದೇ ಸುಗ್ರೀವಾಜ್ಞೆ ಅಥವಾ ಮಸೂದೆ ತನ್ನ ಮುಂದೆ ಬಂದಾಗ, ಅದು ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ದೃಢವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ” ಎಂದು  ಹೇಳಿದರು.

”ಕೇರಳದ ಜನರ ಕಲ್ಯಾಣಕ್ಕಾಗಿ ಮಂಡಿಸಿದ ಮಸೂದೆ ಅಥವಾ ಸುಗ್ರೀವಾಜ್ಞೆ ತನ್ನ ಮೇಜಿನ ಮೇಲೆ ಒಂದು ಗಂಟೆಯೂ ಉಳಿಯುವುದಿಲ್ಲ.  ಅದನ್ನು ತತ್ ಕ್ಷಣ ವಿಲೇವಾರಿ ಮಾಡುತ್ತೇನೆ. ಆದರೆ ಸರಕಾರ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಅವುಗಳ ಸ್ವಾಯತ್ತತೆಯನ್ನು ನಾಶಮಾಡಲು ಕಾನೂನಿನ ಅಧಿಕಾರವನ್ನು ಬಳಸುತ್ತಾರೆ ಮತ್ತು ಸಂವಿಧಾನದ ಅಕ್ಷರ ಮತ್ತು ಆತ್ಮಕ್ಕೆ ವಿರುದ್ಧವಾಗಿ ಹೋದರೆ ನಾನು ಒಪ್ಪಲು ಸಾಧ್ಯವಿಲ್ಲ” ಎಂದರು.

ಅವರು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ ಏಳು ಮಸೂದೆಗಳ ಬಗ್ಗೆ, ಸಚಿವರು ಬರಲು ಮತ್ತು ಆ ಶಾಸನಗಳ ವಿಷಯಗಳನ್ನು ವಿವರಿಸಲು ಸುಮಾರು ಎರಡು ವರ್ಷಗಳ ಕಾಲ ಕಾಯುತ್ತಿದ್ದೆ. ಮಂತ್ರಿಗಳು ಬಂದರು ಆದರೆ ವಿವರಿಸಲು ಸಾಧ್ಯವಾಗಲಿಲ್ಲ ಎಂದರು.

ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಲು ನಿರ್ಧರಿಸಿದ್ದರಿಂದ, ಅವರು ಕೇಳಿದ ವಿವರಣೆಯನ್ನು ನೀಡುವ ಬದಲು, ಅವರು ಏಳು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಿದ್ದಾರೆ ಎಂದು  ಹೇಳಿದರು.

Advertisement

ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ ಮಸೂದೆಗಳಲ್ಲಿ ಎರಡು ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಗಳು ಸೇರಿವೆ. ಈ ವಿಚಾರ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next