Advertisement

ವೀಡಿಯೋ ಕಳಿಸಿ ಅಸುನೀಗಿದ

10:30 AM Jun 30, 2020 | mahesh |

ಹೈದರಾಬಾದ್‌: “ಆಸ್ಪತ್ರೆಯವರು ವೆಂಟಿ­ಲೇಟರ್‌ ತೆಗೆದಿದ್ದಾರೆ. ಆಮ್ಲ­ಜನಕದ ಸಂಪರ್ಕ ನೀಡಿ ಎಂದು ಮೂರು ಗಂಟೆ­ಯಿಂದ ಅಂಗಲಾ­ಚು­ತ್ತಿದ್ದರೂ, ನಿನಗೀಗಾ­ಗಲೆ ಕೊಟ್ಟಿರುವುದೇ ಸಾಕು ಎನ್ನುತ್ತಿದ್ದಾರೆ. ಎದೆ ಬಡಿತ ನಿಂತಂತೆ ಅನುಭವವಾ­ಗುತ್ತಿದೆ. ಉಸಿರಾಡಲು ಸಹ ಆಗು­ತ್ತಿಲ್ಲ. ಡ್ಯಾಡಿ ಬೈ ಡ್ಯಾಡಿ. ಬೈ ಬೈ ಡ್ಯಾಡಿ…’

Advertisement

ಕೋವಿಡ್ ಸೋಂಕಿಗೆ ತುತ್ತಾಗಿದ್ದ 25 ವರ್ಷದ ಯುವಕನೊಬ್ಬ ತನ್ನ ತಂದೆಗೆ ಈ ರೀತಿ ಸೆಲ್ಫಿ ವಿಡಿಯೋ ಕಳುಹಿಸಿ ಕೊನೆಯು­ಸಿರೆಳೆದಿದ್ದಾನೆ. ಹೈದರಾಬಾದ್‌ ಸಮೀಪದ ಎರ್ರಗುಡ್ಡ ಎದೆ ರೋಗ ಆಸ್ಪತ್ರೆಯ ಕೋವಿಡ್ ಘಟಕದಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆ ಸಿಬಂದಿ ವೆಂಟಿಲೇಟರ್‌ ನೀಡದಿರುವುದೇ ಮಗನ ಸಾವಿಗೆ ಕಾರಣ ಎಂದು ಮೃತನ ತಂದೆ ಆರೋಪಿಸಿ­ದ್ದಾರೆ. ಆದರೆ, ಯುವ­­­ಕ­ನಿಗೆ ಆಮ್ಲಜನಕ­ವನ್ನು ನಿರಂತರವಾಗಿ ನೀಡಲಾಗುತ್ತಿತ್ತು. ಆತ ಮೃತಪಟ್ಟಿರು­ವುದು ಹೃದಯಾ­ಘಾತ­ದಿಂದ ಎಂದು ಆಸ್ಪತ್ರೆ ಅಧೀಕ್ಷಕ ಮೆಹ­ಬೂಬ್‌ ಖಾನ್‌ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next