Advertisement

Hunsur: ತಂಗಿಯನ್ನೇ ಕೆರೆಗೆ ತಳ್ಳಿ ಹತ್ಯೆಗೈದ ಸಹೋದರ; ರಕ್ಷಣೆಗಿಳಿದ ತಾಯಿಯೂ ನೀರುಪಾಲು

12:09 PM Jan 24, 2024 | Team Udayavani |

ಹುಣಸೂರು (ಮೈಸೂರು): ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಸಹೋದರಿ ತಿಳಿಹೇಳಿದರೂ ಕೇಳದೆ ಇದ್ದುದನ್ನು ಕಂಡು ಸಹೋದರನು ಆಕೆಯನ್ನು ಕೆರೆಗೆ ನೂಕಿ ಹತ್ಯೆಗೈದ ಘಟನೆ ಹುಣಸೂರು ತಾಲೂಕಿನ ಮರೂರಿನಲ್ಲಿ ನಡೆದಿದೆ.

Advertisement

ಇದೇ ವೇಳೆ ಮಗಳನ್ನು ಬಚಾವ್ ಮಾಡಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ಧನುಶ್ರೀ (19) ಮತ್ತು ತಾಯಿ ಅನಿತಾ (43) ಮೃತಪಟ್ಟ ದುರ್ದೈವಿಗಳು. ಆರೋಪಿ ನಿತೀಶ್ ನನ್ನು ಗ್ರಾಮಾಂತರ ಠಾಣಾ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಏನು?

ಹುಣಸೂರಿನ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ನಿತೀಶ್ ತಂಗಿಗೆ ಬುದ್ದಿ ಹೇಳಿದ್ದ. ಮನೆಯವರಿಗೂ ಮಾಹಿತಿ ನೀಡಿದ್ದ. ಈ ಬಗ್ಗೆ ಜಗಳವೂ ನಡೆದಿತ್ತು.

Advertisement

ಇತ್ತೀಚೆಗೆ ಇನ್ಸ್ಟಾ ಗ್ರಾಂನಲ್ಲಿ ಬುರ್ಖಾ ಧರಿಸಿಕೊಂಡು ಹೆಸರು ಬದಲಾಯಿಸಿಕೊಂಡಿದ್ದ ಬಗ್ಗೆ ಪೋಸ್ಟ್ ಮಾಡಿದ್ದಳು. ಇದನ್ನು ಗಮನಿಸಿದ ನಿತೀಶ್ ತಾಯಿಗೆ ತಿಳಿಸಿದ್ದಲ್ಲದೆ ತಂಗಿಯೊಂದಿಗೆ ಜಗಳ ಮಾಡಿದ್ದ. ಮಂಗಳವಾರ ತಂಗಿಯನ್ನು ಹಮ್ಮಿಗೆಯ ಅಜ್ಜಿ ಮನೆಗೆ ಬಿಡುವುದಾಗಿ ತಾಯಿಗೆ ಹೇಳಿ ಮೂವರು ಸಂಜೆ ಹಿರಿಕ್ಯಾತನಹಳ್ಳಿಯಿಂದ ಬೈಕ್ ನಲ್ಲಿ ಹೊರಟಿದ್ದರು.

ಈ ವೇಳೆ ಮರೂರು ಬಳಿಯ ಕೆರೆಬಳಿ ಮೂತ್ರ ವಿಸರ್ಜನೆ ನೆಪದಲ್ಲಿ ಬೈಕ್ ನಿಲ್ಲಿಸಿದ ನಿತೀಶ್ ಕೆಳಗಿಳಿದು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ನೀರಿನಲ್ಲಿ ಮುಳುಗುವುದನ್ನು ಕಂಡ ತಾಯಿ ಮಗಳ ರಕ್ಷಣೆಗೆ ಇಳಿದ ವೇಳೆ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಗ್ಗೆ ಅಗ್ನಿಶಾಮದ ದಳದ ಸಿಬ್ಬಂದಿಗಳು ಶವವನ್ನು ಮೇಲೆತ್ತಿದರು. ವಿಷಯ ತಿಳಿದ ನೂರಾರು ಗ್ರಾಮಸ್ಥರು ಕೆರೆ ಬಳಿ ಜಮಾಯಿಸಿದ್ದರು‌.

Advertisement

Udayavani is now on Telegram. Click here to join our channel and stay updated with the latest news.

Next