Advertisement

ಹುಣಸೂರು : ಕರ್ತವ್ಯ ನಿರತ ನೌಕರ ಹೃದಯಾಘಾತದಿಂದ ಸಾವು

06:59 PM Apr 07, 2022 | Team Udayavani |

ಹುಣಸೂರು : ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯ ಡಿ.ಗ್ರೂಪಿನ ನೌಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಮೂಲತಃ ಕಟ್ಟೆಮಳಲವಾಡಿ ಗ್ರಾಮದ ನಿಂಗರಾಜ್(೫೭) ಮೃತರು. ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಆಸ್ಪತ್ರೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಕುಸಿದು ಬಿದ್ದಿದ್ದರು, ತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೆಶರಾಜ್ ಅರಸ್, ಡಾ.ಉಮೇಶ್, ಡಾ. ಸಚಿದಾನಾಂದಮೂರ್ತಿ, ಡಾ.ಯೋಗೇಶ್ ಹಾಗೂ ಸಹೊದ್ಯೋಗಿಗಳು ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸ್ವಗ್ರಾಮ ಕಟ್ಟೆಮಳಲವಾಡಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಹೋದ್ಯೋಗಿಗಳು ಬಾಗವಹಿಸಿದ್ದರು.

ಇದನ್ನೂ ಓದಿ : ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಮತ್ತೆ ಬದಲು! : ದಿನಾಂಕ ಇಂತಿವೆ

Advertisement

Udayavani is now on Telegram. Click here to join our channel and stay updated with the latest news.

Next