Advertisement

ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

12:32 PM May 07, 2020 | Naveen |

ಹುಣಸಗಿ: ಕೋವಿಡ್ ವೈರಸ್‌ ಪರಿಣಾಮ ಕಳೆದ ಒಂದೂವರೆ ತಿಂಗಳ ಕಾಲ ಉದ್ಯೋಗವಿಲ್ಲದೆ ಪರದಾಡುವಂತಾಗಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೈ ಹಿಡದಿದೆ.

Advertisement

ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಹಾಕಿಕೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಅದರಂತೆ ಕಾಮಗಾರಿ ಕೂಡ ಚುರುಕಾಗಿ ನಡೆಯುತ್ತಿದೆ. ಹುಣಸಗಿ ತಾಲೂಕು ಮಾಳನೂರು ಗ್ರಾಪಂ ವ್ಯಾಪ್ತಿಯಲ್ಲಿ 1100 ಉದ್ಯೋಗ ಚೀಟಿಗಳಿವೆ. ಒಟ್ಟು 150 ಕಾಮಗಾರಿ ಅನುಮೋದಿಸಲಾಗಿದೆ. ಇವುಗಳ ಪೈಕಿ 100ಕ್ಕೂ ಹೆಚ್ಚು ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ನಮ್ಮ ಹೊಲ ನಮ್ಮದಾರಿ, ಕೆರೆ ಹೂಳು, ಬದು ನಿರ್ಮಾಣ, ಕೃಷಿ ಹೊಂಡ ತೆಗೆಯುವುದು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಜೋರಾಗಿ ನಡೆಯುತ್ತಿದೆ. ಮಹಿಳೆಯರು ಮತ್ತು ಪುರುಷರಿಗೆ ಸಮನಾಗಿ 275 ರೂ. ಕೂಲಿ ನೀಡಲಾಗುತ್ತಿದೆ. ವಾರಕೊಮ್ಮೆ ಕೂಲಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಸುರಕ್ಷತೆಗಾಗಿ ಎಲ್ಲರಿಗೂ ಮಾಸ್ಕ್ ಹಾಗೂ ಸಾನಿಟೈಜರ್‌ ವಿತರಿಸಲಾಗಿದೆ. ಅಗತ್ಯ ಬಿದ್ದರೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 8:00ರಿಂದ ಮಧ್ಯಾಹ್ನ 12:00ರ ವರೆಗೂ ಉದ್ಯೋಗ ಖಾತ್ರಿ ಕೆಲಸ ಮಾಡುತ್ತೇವೆ ಎಂದು ಕಾರ್ಮಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಗ್ರಾಪಂ ಅಧ್ಯಕ್ಷ ಮೌನೇಶ ಮೇಟಿ, ತಾಲೂಕು ಅಧಿಕಾರಿ ಎ.ಡಿ. ಶರಣಗೌಡ, ಇಂಜಿನಿಯರ್‌ ಪ್ರವೀಣಕುಮಾರ ಕಟ್ಟಿಮನಿ, ಬಿಎಫ್‌ಟಿ ಶರಣು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಮಳೆಗಾಲ ಪ್ರಾರಂಭ ಆಗುವವರೆಗೂ ಕಾಮಗಾರಿ ನಡೆಯಲಿದೆ. ಜಾಬ್‌ ಕಾರ್ಡ್‌ ಇಲ್ಲದೆ ಕಾಲಿ ಕುಳಿತವರು ಪಂಚಾಯಿತಿಗೆ ಬಂದರೆ ಜಾಬ್‌ಕಾರ್ಡ್ನೊಂದಿಗೆ ಕೆಲಸ ನೀಡಲಾಗುವುದು. ಕೋವಿಡ್  ನಿಯಮ ಪಾಲಿಸಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ.
ಮಲ್ಲನಗೌಡ ಹುಣಸಗಿ,
ಅಭಿವೃದ್ಧಿ ಅಧಿಕಾರಿ ಮಾಳನೂರು ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next