Advertisement

Hubli; ಕರ್ತವ್ಯ ಬಹಿಷ್ಕರಿಸಿ ಪಾಲಿಕೆ ಕಚೇರಿ ಸಿಬ್ಬಂದಿ ಪ್ರತಿಭಟನೆ

03:06 PM Jul 25, 2024 | Team Udayavani |

ಹುಬ್ಬಳ್ಳಿ: ಜೂನ್ ತಿಂಗಳ ವೇತನ ಹಾಗೂ 7ನೇ ವೇತನ ಆಯೋಗದ ಮಧ್ಯಂತರ ಪರಿಹಾರ ಶೇ.17 ನ್ನು ಅಳವಡಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಹಾನಗರ ಪಾಲಿಕೆ ಕಚೇರಿ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ಮುಂದಾಗಿದ್ದಾರೆ.

Advertisement

ಇಲ್ಲಿನ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. 7ನೇ ವೇತನ ಆಯೋಗದ ಮಧ್ಯಂತರ ಪರಿಹಾರ ಆದೇಶ ನೀಡಿ ಜನೇವರಿ ತಿಂಗಳಿನಿಂದ ಇಲ್ಲಿಯವರೆಗೆ ಏಳು ತಿಂಗಳು ಕಳೆದರೂ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನಕ್ಕೆ ಅಳವಡಿಸಿಲ್ಲ. 2022 ರಿಂದ ನಾಲ್ಕು ತುಟ್ಟಿ ಭತ್ಯೆಯ ಅಂತರ ಬಾಕಿ ಉಳಿದಿದೆ. ಅಲ್ಲದೇ ಸಕಾಲಕ್ಕೆ ವೇತನ ಪಾವತಿ ಮಾಡುತ್ತಿಲ್ಲ‌. ಇದರಿಂದ ಜೀವನ ನಿರ್ವಹಣೆ ಕಷ್ಟ ಎಂಬುವುದು ಸಿಬ್ಬಂದಿಯ ಅಸಮಧಾನವಾಗಿದೆ‌.

ಪ್ರತಿಭಟನೆಯಲ್ಲಿ ಅಟೆಂಡರ್, ಸಿಪಾಯಿ ಸೇರಿದಂತೆ ಕಚೇರಿ ಸಿಬ್ಬಂದಿ, ಆರೋಗ್ಯ ನಿರೀಕ್ಷರು, ಮೇಲ್ವಿಚಾರಕರು, ಕಚೇರಿ ಅಧೀಕ್ಷಕರು ಸೇರಿದಂತೆ ಹುಬ್ಬಳ್ಳಿ ಹಾಗೂ ಧಾರವಾಡದ ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ವಿವಿಧ ವಲಯಗಳ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿದ್ದಾರೆ.

ಹು- ಧಾ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ, ಉಪಾಧ್ಯಕ್ಷ ಕಾಶಿನಾಥ ಜಾದವ್, ಶ್ರೀನಾಥ ಪವಾರ, ಮಹಾಂತೇಶ ಹರಕುಣಿ, ಮಂಜುಳಾ ನಾಟಿಕರ, ಶಂಕರ ಗಂಗಾವತಿ, ವಿಶ್ವನಾಥ ಪಾಟೀಲ, ಗುರುನಾಥ ತಾಳಿಕೋಟಿ, ಅರುಣಕುಮಾರ, ಪ್ರಶಾಂತ ಶಿವಮೊಗ್ಗೆ, ವಿದ್ಯಾ ಪಾಟೀಲ, ರಾಧಾ ಸ್ವಾಧಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next