Advertisement

ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು

06:20 PM May 14, 2020 | Naveen |

ಹೊಳಲ್ಕೆರೆ: ತಾಲೂಕಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ದೊರೆತಿದ್ದು ಎಲ್ಲಾ ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಪಟ್ಟಣದ ಐತಿಹಾಸಿಕ ಹೊನ್ನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದು ಕೋಡಿ ದುರಸ್ತಿ, ಒತ್ತುವರಿ ತೆರವು, ಜಾಲಿ ತೆರವು, ಹೂಳು ತೆಗೆಯುವುದು, ಏರಿ ಪಿಚ್ಚಿಂಗ್‌ ಮಾಡಲಾಗುವುದು. ಹೊಳಲ್ಕೆರೆ ಪಟ್ಟಣದ ಮೂರು ಕೆರೆಗಳ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ ನೀಡಲಾಗಿದೆ. ಕೆಂಚಾಪುರ ಕೆರೆಗೆ 1 ಕೋಟಿ, ಮಾಳೇನಹಳ್ಳಿ ಹೊಸ ಕೆರೆ ನಿರ್ಮಾಣಕ್ಕೆ 2 ಕೋಟಿ, ಅರೆಹಳ್ಳಿ ಹೊಸ ಕೆರೆಗೆ 2 ಕೋಟಿ, ದಾಸರಹಳ್ಳಿಯ ಅಂಜನಾಪುರದ ಕೆರೆಗೆ 2 ಕೋಟಿ, ಹುಳೆಮಳಲಿ ಕೆರೆಗೆ 1 ಕೋಟಿ, ಶಿವಪುರ ಕೆರೆ ಹಾಗೂ ನೀರು ತಡೆಗೆ ಗೋಡೆ ಕಟ್ಟಲು 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯತ್‌ ಸದಸ್ಯರಾದ ಮಲ್ಲಿಕಾರ್ಜುನ್‌, ವಿಜಯ, ಕೆ.ಸಿ. ರಮೇಶ್‌, ಬಸವರಾಜ್‌ ಯಾದವ್‌, ಮುರುಗೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next