Advertisement

ಡಾ|ಎಂ.ಎಸ್‌.ಭಟ್‌ಗೆ ಸದ್ಗುರು ಸಂಗೀತ ಶಾಲೆಯ ಗೌರವಾರ್ಪಣೆ

12:30 AM Feb 15, 2019 | Team Udayavani |

ವೈದ್ಯಕೀಯ ವೃತ್ತಿ ಯ ಮಧ್ಯೆಯೂ ಸಂಗೀತವನ್ನು ಪ್ರೀತಿಸುವವರು ಬಂಟ್ವಾಳದ ವೈದ್ಯ ಡಾ| ಎಂ.ಎಸ್‌. ಭಟ್‌. ಸರಳ ಸಜ್ಜನಿಕೆಯ ವ್ಯಕ್ತಿಯಾದ ಇವರ ಇಡೀ ಕುಟುಂಬವೇ ಸಂಗೀತ ಪರಂಪರೆ. ಎಂ.ಎಸ್‌. ಭಟ್‌ ಬಾಲ್ಯದಲ್ಲಿ ಕನ್ಯಾನದ ಬಜಕ್ಕಳ ವಿ| ಗಣಪತಿ ಭಟ್‌ ಇವರಲ್ಲಿ ಸಂಗೀತವನ್ನು ಕಲಿತರು. ಮುಂದೆ ಮೈಸೂರಿನಲ್ಲಿ ವಿ| ಕೆ.ಜೆ. ವೆಂಕಟಾಚಾರ್‌ ಮತ್ತು ವಿ|ಎನ್‌. ನಂಜುಂಡಸ್ವಾಮಿಯವರ ಅಯ್ಯನಾರ್‌ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸವನ್ನು ಮುಂದುವರಿಸಿದರು. ಹಲವಾರು ಕಡೆ ಸಂಗೀತ ಕಾರ್ಯಕ್ರಮವನ್ನು ನೀಡಿದ ಅನುಭವವನ್ನೂ ಹೊಂದಿರುತ್ತಾರೆ. ಡಾ| ಎಂ.ಎಸ್‌. ಭಟ್‌ಗೆ ಫೆ.17ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಶ್ರೀ ಸದ್ಗುರು ಸಂಗೀತ ಶಾಲೆ, ಮಂಗಳೂರು ದಶಮಾನೋತ್ಸವದ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಗುವುದು. 

Advertisement

ಉಮಾಶಂಕರಿ

Advertisement

Udayavani is now on Telegram. Click here to join our channel and stay updated with the latest news.

Next