Advertisement

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

07:42 PM Apr 23, 2024 | Shreeram Nayak |

ಶಿವಮೊಗ್ಗ:ಈಶ್ವರಪ್ಪ ನಿಜವಾದ ಗಂಡಸೇ ಆಗಿದ್ದರೆ ಮುಂದೆಯಾದರೂ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲಿ. ಇಲ್ಲದಿದ್ದರೆ ಫೀಡಿಂಗ್‌ ಬಾಟಲ್‌ ಕೊಟ್ಟು ಮನೆಯಲ್ಲೇ ಕೂರಿಸಲಿ ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಶ್ವರಪ್ಪ ಕೀಳು ಮಟ್ಟದ ರಾಜಕಾರಣಿ. ಗೀತಾ ಶಿವರಾಜ್‌ಕುಮಾರ್‌ ಸಾಮಾನ್ಯರಲ್ಲ. ಅವರು ಬಂಗಾರಪ್ಪ ಪುತ್ರಿ. ಪದೇ ಪದೇ ಕಾಂಗ್ರೆಸ್‌ನವರು ನಮ್ಮ ಜತೆಯಲ್ಲಿದ್ದಾರೆ ಎಂದು ಹೇಳುವುದನ್ನು ಬಿಡಬೇಕು. ಪ್ರಧಾನಿ ಮೋದಿ ಪ್ರಚಾರ ಸಭೆಗೆ ಮಾಂಗಲ್ಯ ತಂದು ಚರ್ಚೆ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಕೂಡ ಕೀಳುಮಟ್ಟಕ್ಕಿಳಿದು ಮಾತನಾಡಬಹುದು.

ಪ್ರಧಾನಿ ಈ ರೀತಿ ರಾಜಕಾರಣ ಮಾಡಿದರೆ ಹೇಗೆ? ಮನುಷ್ಯರಾದವರು ಪವಿತ್ರವಾದ ತಾಳಿ ಬಗ್ಗೆ ಮಾತನಾಡಬಾರದು. ಭಾರತಾಂಬೆ ಎನ್ನುತ್ತೀರಾ, ಮಾಂಗಲ್ಯದ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next