Advertisement

ಜನಸೇವೆಗೆ ಸರ್ಟಿಫಿಕೆಟ್‌ ಬೇಕಿಲ್ಲ

05:03 PM Apr 30, 2020 | Team Udayavani |

ಹೊನ್ನಾಳಿ: ಬಸವಣ್ಣನವರ ಕಾಯಕ ಮತ್ತು ನಿತ್ಯ ದಾಸೋಹದ ತತ್ವವನ್ನು ಕಳೆದ 30 ವರ್ಷಗಳಿಂದ ಮೈಗೂಡಿಸಿಕೊಂಡು ಪಾಲಿಸುತ್ತಿದ್ದೇನೆ. ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಅವಿರತ ಹೋರಾಟ ನಡೆಸಿ ಎಲ್ಲರ ಆಶೀರ್ವಾದದಿಂದ 3 ಬಾರಿ ಶಾಸಕನಾಗಿದ್ದೇನೆ. ಜನಸೇವೆ ನನ್ನ ವೈಯಕ್ತಿಕ ಹಕ್ಕಾಗಿದ್ದು, ಈ ವಿಷಯದಲ್ಲಿ ನನಗೆ ಯಾರಿಂದಲೂ ಸರ್ಟಿಫಿಕೇಟ್  ಪಡೆಯುವ ಅವಶ್ಯಕತೆಯಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕು ಸುರಹೊನ್ನೆ, ಯರಗನಾಳು, ಚಿನ್ನಿಕಟ್ಟೆ, ಸವಳಂಗ, ಚಟ್ನಹಳ್ಳಿ ಸೇರಿದಂತೆ 14 ಗ್ರಾಪಂಗಳ ವ್ಯಾಪ್ತಿಯ ಬಡವರು, ಕೂಲಿ ಕಾರ್ಮಿಕರಿಗೆ ಬುಧವಾರ ಆಹಾರ ಕಿಟ್‌ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ನನ್ನ ಬಗ್ಗೆ ವಿರೋಧಿಗಳು ಇಲ್ಲಸಲ್ಲದ ಟೀಕೆ ಟಿಪ್ಪಣಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಕೊರೊನಾ ಮಹಾಮಾರಿ ಮನುಕುಲವನ್ನು ಕಂಗೆಡಿಸಿದೆ ಇಂತಹ ದುಸ್ತರ ಪರಿಸ್ಥಿತಿಯಲ್ಲಿ ಕ್ಷೇತ್ರದ ಮಾಜಿ ಶಾಸಕರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ಎರಡು ಬಾರಿ ಶಾಸಕರಾಗಿ ಯಾವ ರೀತಿ ಜನರ ಸೇವೆ ಮಾಡಿದ್ದಾರೆಂಬುದನ್ನು ಸಾರ್ವಜನಿಕರೇ ಮಾತಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಎಲ್ಲಿಯೂ ಕಾಣಿಸಿಕೊಳ್ಳದೆ ಹತಾಶ ಮನೋಭಾವದಿಂದ ಏಕಾಏಕಿ ಹೊರಬಂದು ಹಾದಿ ರಂಪ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕರು ಸ್ವಂತ ಖರ್ಚಿನಲ್ಲಿ ಆಹಾರ ಕಿಟ್‌, ಮಾಸ್ಕ್ ವಿತರಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದನ್ನು ಜನತೆ ಗಮನಿಸುತ್ತಿದ್ದಾರೆ. ಕ್ಷೇತ್ರದ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿಗೆ ತೆರಳಿದ್ದಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದಿದ್ದೇನೆ. ಹಾಗಾಗಿ ನಾನು ಓಡಾಡಲು ಯಾರ ಅಪ್ಪಣೆಯೂ ಬೇಕಿಲ್ಲ. ಕಾನೂನು ನನಗೂ ಗೊತ್ತಿದೆ, ಮಾಜಿ ಶಾಸಕರಿಂದ ಕಲಿಯುವಷ್ಟು ದಡ್ಡ ನಾನಲ್ಲ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next