Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಿಟ್‌ ವಿತರಣೆ

05:28 PM Apr 24, 2020 | Naveen |

ಹೊನ್ನಾಳಿ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಿವಿಧ ಫಲಾನುಭವಿಗಳಿಗೆ ಆಹಾರ ಕಿಟ್‌ಗಳನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿತರಿಸಿದರು.

Advertisement

ಗುರುವಾರ ಪಪಂ ಆವರಣದಲ್ಲಿ ಆಶಾ ಕಾರ್ಯಕರ್ತೆಯರು, ಟೈಲರ್‌ಗಳು, ಪತ್ರಿಕಾ ವಿತರಿಕರಿಗೆ ಹಮ್ಮಿಕೊಂಡಿದ್ದ ಆಹಾರ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಶಾಸಕರು ಕಿಟ್‌ ವಿತರಣೆಗೆ ಮುನ್ನ ಮಾತನಾಡುವ ಸಂದರ್ಭದಲ್ಲಿ ಫಲಾನುಭವಿಗಳು ಕುಳಿತು ಅವರ ಮಾತುಗಳನ್ನು ಆಲಿಸಿದ್ದಾರೆ. ಕಿಟ್‌ ವಿತರಣೆ ಆರಂಭವಾಗುತ್ತಿದ್ದಂತೆ ನಾ ಮುಂದು ತಾಮುಂದು ಎಂದು ನುಗ್ಗಿ ಕಿಟ್‌ಗಳನ್ನು ಪಡೆಯಲು ಪ್ರಾರಂಭ ಮಾಡಿದಾಗ ಶಾಸಕರು ಆಹಾರ ಕಿಟ್‌ ವಿತರಣೆ ಮಾಡಿದರು.

ಸ್ಥಳದಲ್ಲಿದ್ದ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಇದ್ದರೂ ಇಲ್ಲಿ ಯಾವ ನಿಯಮವೂ ಪಾಲಿಸದೇ ಇರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next