Advertisement

ಲಾರಿ ಢಿಕ್ಕಿ: ಬೈಕ್‌ ಸವಾರ ಸಾವು

11:53 PM Apr 17, 2023 | Team Udayavani |

ಹಿರಿಯಡಕ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ರವಿವಾರ ಬೆಳಗ್ಗೆ ಹಿರಿಯಡಕ ಕುಕ್ಕೆಹಳ್ಳಿ ರಸ್ತೆಯ ನಾಗಬನದ ಬಳಿ ಸಂಭವಿಸಿದೆ.
ಮೃತರನ್ನು ಕುಕ್ಕೆಹಳ್ಳಿಯ ರಾಘವೇಂದ್ರ ಎಂದು ಗುರುತಿಸಲಾಗಿದೆ.

Advertisement

ಸಹಸವಾರ ಕುಕ್ಕೆಹಳ್ಳಿಯ ಬಚ್ಚ ನಾಯ್ಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಜಗದೀಶ್‌ ಲಾರಿಯನ್ನು ರಸ್ತೆಯ ಉಬ್ಬಿನಲ್ಲಿ ಏಕಾಏಕಿ ಯಾವುದೇ ಸೂಚನೆ ನೀಡದೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಹಿರಿಯಡಕ ಕಡೆಯಿಂದ ಬಂದ ಬೈಕ್‌ಗೆ ಢಿRಕಿ ಹೊಡೆದಿದೆ. ಗಂಭೀರ ಗಾಯಗೊಂಡ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟರು. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next