Advertisement

ಇತಿಹಾಸ ಪ್ರಸಿದ್ಧ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ಜಾತ್ರೆ ಚಾಲನೆ

01:01 PM Feb 08, 2022 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಕೊರೋನಾ ಮಾರ್ಗಸೂಚಿ ಅಡ್ಡಿಯಾಗಿದ್ದು ಸಂಪ್ರದಾಯದಂತೆ 10 ಹೆಜ್ಜೆ ರಥವನ್ನು ಭಕ್ತರು ಎಳೆಯುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.

Advertisement

ಕೊರೋನಾ ಮಾರ್ಗಸೂಚಿ ಅನ್ವಯ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ಜಾತ್ರೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಿರುವುದರಿಂದ ದೇವಸ್ಥಾನದ ಒಳಗೆ ಮಾರ್ಗಸೂಚಿ ಅನುಸರಿಸಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಯಿತು. ಮಂಗಳವಾರ ಸಂಪ್ರದಾಯದಂತೆ 10 ಹತ್ತು ಹೆಜ್ಜೆ ರಥವನ್ನು ಎಳೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು .

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರ ಪುತ್ರ ಸಾಗರ್ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಪ್ಪ ನಾಯಕ್, ಸದಸ್ಯರಾದ ಚಂದ್ರಪ್ಪ ಉಪ್ಪಾರ್, ಚೌಡ್ಕಿ ಹನುಮಂತಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಮುಖಂಡರಾದ ರಾಘವೇಂದ್ರ ಶೆಟ್ಟಿ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ನಾಗರಾಜ್ ಗೌಡ, ನಾಗರಾಜಶೆಟ್ಟಿ ಜೋಗದ ನಾರಾಯಣಪ್ಪ ಜೋಗದ ಹನುಮಂತಪ್ಪ ವೀರಭದ್ರಪ್ಪ ನಾಯಕ, ಈಡಿಗರ ಪರಮೇಶ್ ಸೇರಿ ಅನೇಕ ಭಕ್ತರು ಹಿರೇಜಂತಗಲ್ ವ್ಯಾಪ್ತಿಯ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next