Advertisement

ರೋಗ್‌ ವಿಲನ್‌ ಈಗ ಹೀರೋ

11:40 AM May 07, 2017 | Team Udayavani |

ನೀವು ಪುರಿ ಜಗನ್ನಾಥ್‌ ನಿರ್ದೇಶನದ “ರೋಗ್‌’ ಸಿನಿಮಾ ನೋಡಿದ್ದರೆ ನಿಮಗೆ ಇವರ ಮುಖಪರಿಚಯವಿರುತ್ತದೆ. ಹೆಸರು ಠಾಕೂರ್‌ ಅನೂಪ್‌ ಸಿಂಗ್‌. ಇಶಾನ್‌ ನಾಯಕರಾಗಿ ಲಾಂಚ್‌ ಆದ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾದ “ರೋಗ್‌’ ಸಿನಿಮಾದಲ್ಲಿ ಖಡಕ್‌ ವಿಲನ್‌ ಆಗಿ ಮಿಂಚಿದವರು ಠಾಕೂರ್‌ ಅನೂಪ್‌ ಸಿಂಗ್‌.

Advertisement

ವಿಭಿನ್ನ ರೀತಿಯ ಪಾತ್ರಕ್ಕೆ ತಕ್ಕಂತೆ ತಮ್ಮ ಮ್ಯಾನರೀಸಂ ಮೂಲಕ ಗಮನ ಸೆಳೆದಿದ್ದ ಅನೂಪ್‌ ಈಗ ಹೀರೋ ಆಗುತ್ತಿದ್ದಾರೆ. ಅದು ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಸಿನಿಮಾ ಮೂಲಕ.  ಹೌದು, ಸುನೀಲ್‌ ಕುಮಾರ್‌ ದೇಸಾಯಿ “ಉದ್ಘರ್ಷ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ತಯಾರಾಗುತ್ತಿದೆ.

ಈ ಚಿತ್ರಕ್ಕೆ ಠಾಕೂರ್‌ ಅನೂಪ್‌ ಸಿಂಗ್‌ ನಾಯಕರಾಗಿ. “ರೋಗ್‌’ ಕೂಡ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗಿತ್ತು. ಆ ಚಿತ್ರದ ಮೂಲಕ ವಿಲನ್‌ ಆಗಿದ್ದ ಠಾಕೂರ್‌ ಈಗ ಎರಡೂ ಭಾಷೆಯಲ್ಲೂ ಹೀರೋ ಆಗಿದ್ದಾರೆ. ಠಾಕೂರ್‌ ಈಗಾಗಲೇ ಹಿಂದಿ ಹಾಗೂ ತೆಲುಗಿನಲ್ಲಿ ಕೆಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬಾಡಿ ಬಿಲ್ಡಿಂಗ್‌ನಲ್ಲೂ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಠಾಕೂರ್‌ ಈಗ ಹೀರೋ ಆಗಿ ಮಿಂಚಲಿದ್ದಾರೆ. ಈ ಸಿನಿಮಾ ಮೂಲಕ ತಮಿಳು ನಟಿ ಧನ್ಸಿಕಾ ಕೂಡಾ ಕನ್ನಡಕ್ಕೆ ಬರುತ್ತಿದ್ದಾರೆ. ಯಾವ ಧನ್ಸಿಕಾ  ಎಂದರೆ ರಜನಿಕಾಂತ್‌ ಅವರ “ಕಬಾಲಿ’ ಚಿತ್ರವನ್ನು ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ರಜನಿಕಾಂತ್‌ ಅವರ ಮಗಳ ಪಾತ್ರ ಮಾಡಿದವರು ಧನ್ಸಿಕಾ.

ಈಗ ಸುನೀಲ್‌ ಕುಮಾರ್‌ ದೇಸಾಯಿ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. “ಉದ್ಘರ್ಷ’ ಕೂಡಾ ಒಂದು ವಿಭಿನ್ನ ಕಥಾಹಂದರವುಳ್ಳ ಸಿನಿಮಾವಾಗಿದ್ದು, “ಬ್ಯಾಟಲ್‌ ಅಟ್‌ ಇಟ್ಸ್‌ ಪೀಕ್‌’ ಎಂಬ ಟ್ಯಾಗ್‌ಲೈನ್‌ ಕೂಡಾ ಚಿತ್ರಕ್ಕಿದೆ. ಈ ಚಿತ್ರವನ್ನು ಮಂಜುನಾಥ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಶುರುವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next