Advertisement

ಪಾರಂಪರಿಕ ಮಾದರಿ ಆರೋಗ್ಯ ಸಮಾಜ ಕಟ್ಟಿ

01:17 PM May 22, 2017 | |

ದಾವಣಗೆರೆ: ಪಾರಂಪರಿಕ ವೈದ್ಯ ಪದ್ಧತಿಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಮುಟ್ಟಿಸುವ ಮೂಲಕ ಮಾದರಿ ಆರೋಗ್ಯ ಸಮಾಜ ನಿರ್ಮಾಣಕ್ಕೆ ಪಾರಂಪರಿಕ ವೈದ್ಯರು ಶ್ರಮಿಸಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯ ಕಾರ್ಯದರ್ಶಿ ಎಂ. ಗೋಪಾಲಕೃಷ್ಣ ತಿಳಿಸಿದ್ದಾರೆ. 

Advertisement

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಪಾರಂಪರಿಕ ವೈದ್ಯ ಗುರುಕುಲದ ವಾರ್ಷಿಕೋತ್ಸವ, ಜಾನಪದ ಸರ್ಟಿμಕೇಟ್‌ ಕೋರ್ಸ್‌ ಸಮಾರೋಪದಲ್ಲಿ ಮಾತನಾಡಿದ ಅವರು, ಅನಾದಿ ಕಾಲದಿಂದ ಚಾಲ್ತಿಯಲ್ಲಿರುವ ಪಾರಂಪರಿಕ ವೈದ್ಯಕೀಯ  ಪದ್ಧತಿಯನ್ನ ಅನುಸರಿಸುವ ಮೂಲಕ ಪ್ರತಿಯೊಬ್ಬರು ತಾವೇ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಿಸಿದರು.  

ಬೆಂಗಳೂರಿನ ಎನ್‌ಜೆಇಎಫ್‌, ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಾರಂಪರಿಕ ವೈದ್ಯ ಪದ್ಧತಿ ಹಲವರ ಅನೇಕಾನೇಕ ಆರೋಗ್ಯ ಸಮಸ್ಯೆ ಬಗೆಹರಿಸುವಲ್ಲಿ ನೆರವಾಗಿದೆ. ಹಾಗಾಗಿಯೇ ಪಾರಂಪರಿಕ ವೈದ್ಯ ಪದ್ಧತಿಯನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. 

3,900 ವಿವಿಧ ಗಿಡಮೂಲಿಕೆಗಳ ಲಭ್ಯತೆ, ಪ್ರತಿಯೊಂದು ಮಾಹಿತಿ ಇರುವ ಪುಸ್ತಕ ಸಿದ್ಧಪಡಿಸಲಾಗುತ್ತಿದೆ. ಅತೀ ಬೇಗ ಲೋಕಾರ್ಪಣೆಗೊಳ್ಳಲಿದೆ. ಎಲ್ಲಾ ಶಾಲಾ-ಕಾಲೇಜು, ವಿಶ್ವವಿದ್ಯಾಲಯದಲ್ಲಿ ಆ ಪುಸ್ತಕ ದೊರೆಯುವಂತಾಗಬೇಕು ಎಂಬುದು ತಮ್ಮ ಅಭಿಲಾಷೆ. ಪ್ರತಿಯೊಬ್ಬರಿಗೆ ಗಿಡಮೂಲಿಕೆಗಳ ಸಮಗ್ರ ಪರಿಚಯ ಆಗಬೇಕು ಎಂದು ತಿಳಿಸಿದರು. 

ಪಾರಂಪರಿಕ ವೈದ್ಯ ಪದ್ಧತಿ ಅನುಸರಿಸುವರು ಚಿಕಿತ್ಸೆಗಾಗಿ ನಮ್ಮಲ್ಲಿಗೆ ಬರುವಂತಹರವಲ್ಲಿ ಮೊದಲು ಆತ್ಮವಿಶ್ವಾಸ ಬೆಳೆಸಬೇಕು. ಆರೋಗ್ಯ ಸಮಸ್ಯೆ ನಿವಾರಣೆಯಾಗುವ ವಿಶ್ವಾಸ ಮೂಡಿಸಿದ್ದಲ್ಲಿ ಶೇ. 75 ರೋಗ ವಾಸಿಯಾಗುತ್ತದೆ. ಔಷಧೋಪಾಚಾರದ ಮೂಲಕ ಇನ್ನುಳಿದ ಶೇ. 25 ರಷ್ಟು ಸಮಸ್ಯೆ ನಿವಾರಿಸಬಹುದು.

Advertisement

ಹಣಕ್ಕೆ ಹೆಚ್ಚಿನ ಮಾನ್ಯತೆ ನೀಡದೆ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪವಿತ್ರ ಪಂಚವಟಿ ವನಕ್ಕೆ ಚಾಲನೆ ನೀಡಿದ ಲಿಂಗರಾಜು ನಡುಮನಿ ಮಾತನಾಡಿ, ಪಂಚವಟಿ ವನ ಎಂದರೆ ಹತ್ತಿ, ಬಿಲ್ವಪತ್ರೆ, ಬನ್ನಿ, ಅರಳಿ, ಬೇವು ಮರಗಳನ್ನ ಒಂದೇ ಕಡೆ ಬೆಳೆಸುವುದು. ಪೂಜೆಗೆ ಬಳಸುವ ಬಿಲ್ವಪತ್ರೆಯಲ್ಲಿ ಹೃದ್ರೋಗ ಸಮಸ್ಯೆ ದೂರ ಮಾಡುವ ಶಕ್ತಿ ಇದೆ.

ಮಹಿಳೆಯರ ಮಾಸಿಕ ಮುಟ್ಟಿನ ಸಮಸ್ಯೆ ನಿವಾರಣೆ ಇತರೆ ಸಮಸ್ಯೆ ದೂರ ಮಾಡುವ ಶಕ್ತಿ ಬನ್ನಿಯಲ್ಲಿದೆ. ಬೇವು ಬಳಸುವುದರಿಂದ ಚರ್ಮದ ಸಮಸ್ಯೆ ದೂರ ಮಾಡಬಹುದು. ವೃಕ್ಷರಾಜ ಎಂದೇ ಕರೆಯಲ್ಪಡುವ ಅರಳಿಯಿಂದ ಮೂತ್ರಕೋಶ ಸಮಸ್ಯೆ ದೂರ ಮಾಡಬಹುದು. ಹತ್ತಿ ಹಣ್ಣು ತಿನ್ನುವುದರಿಂದ ಕಣ್ಣಿನ ಬೆಳಕು ಹೆಚ್ಚಿಸಬಹುದು ಎಂದು ತಿಳಿಸಿದರು. 

ಈವರೆಗೆ ಶಾಲಾ-ಕಾಲೇಜು ವಿವಿಧೆಡೆ 200 ಪವಿತ್ರ ಪಂಚವಟಿ ವನ ನಿರ್ಮಾಣ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಪವಿತ್ರ ಪಂಚವಟಿ ವನ  ಅಭಿಯಾನ ಪ್ರಾರಂಭಿಸುವ ಚಿಂತನೆ ಇದೆ. ಪಾರಂಪರಿಕವೈದ್ಯಕೀಯ ಪರಿಷತ್‌ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನಿರ್ದೇಶಕ ಡಾ| ಟಿ.ಎನ್‌. ದೇವರಾಜ್‌ ಮಾತನಾಡಿ, ಅತಿ ಪ್ರಾಚೀನವಾದ ಪಾರಂಪರಿಕ ವೈದ್ಯ ಪದ್ಧತಿಯನ್ನ ಪುನರ್‌ಜೀjವನಗೊಳಿಸುವ ಮಹತ್ತರ ಉದ್ದೇಶದಿಂದ ಪಾರಂಪರಿಕ ವೈದ್ಯಕೀಯ ಪರಿಷತ್‌ 9 ತಿಂಗಳ ಜಾನಪದ ಸರ್ಟಿμಕೇಟ್‌ ಕೋರ್ಸ್‌ ಪ್ರಾರಂಭಿಸಲಾಗಿದೆ. ಈ  ಪದ್ಧತಿಯನ್ನ ಮುಂದುವರೆಸುವ ಮೂಲಕ ಎಲ್ಲರಿಗೂ ಅನುಕೂಲ ಮಾಡಬೇಕು ಎಂದು ತಿಳಿಸಿದರು.

ಪರಿಷತ್‌ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಅಧ್ಯಕ್ಷತೆ, ಇರಕಲ್‌ನ ಜಗದ್ಗುರು ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಶಿವಮೂರ್ತಪ್ಪ, ಜೆ. ಮಹಾದೇವಯ್ಯ ಇತರರು ಇದ್ದರು. ಪುಷ್ಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಮತಾ ನಾಗರಾಜ್‌ ಸ್ವಾಗತಿಸಿದರು. ಪಂಕಜಾ ವಿ. ರಾಜು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next