Advertisement

ಶ್ರೀರಂಗಪಟ್ಟಣದಲ್ಲಿ ಭಾರಿ ಮಳೆ : ಕೃಷಿ ಭೂಮಿ ಜಲಾವೃತ, ಮನೆಗಳು ಧರೆಗೆ, ಜನಜೀವನ ಅಸ್ತವ್ಯಸ್ತ

12:25 PM Aug 30, 2022 | Team Udayavani |

ಶ್ರೀರಂಗಪಟ್ಟಣ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶ್ರೀರಂಗಪಟ್ಡಣದ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಕುಸಿತಗೊಂಡಿವೆ.

Advertisement

ತಾಲೂಕಿನಲ್ಲಿ ಹರಿಯುವ ಲೋಕಪಾವನಿ ನದಿ ಮಳೆಯಿಂದ ಹುಕ್ಕಿ ಹರಿದು, ನದಿ ಪ್ರವಾಹಕ್ಕೆ ತಾಲೂಕಿನ ಹಲವೆಡೆ ರೈತರ ಜಮೀನುಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿವೆ.

ತಾಲೂಕಿನ ಚಿಂದಗಿರಿಕೊಪ್ಪಲು,ಕೆ.ಶೆಟ್ಟಹಳ್ಳಿ,ಕೂಡಲಕುಪ್ಪೆಯಲ್ಲಿ ರೈತರ ಜಮೀನು ಜಲಾವೃತವಾಗಿ‌ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.

ಲೋಕಪಾವನಿ ನದಿ ಪಾತ್ರದ ಹಲವು ಮನೆಗಳ ಗೋಡೆ ಬಿರುಕು ಕಾಣಿಸಿಕೊಂಡಿವೆ, ಸರ್ಕಾರ ಜಲಾವೃತ ಗೊಂಡು ಹಾನಿಗೊಳಗಾದ ಪಲಾನುಭವಿಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ದೋಟಿಹಾಳ: ಶಿಥಿಲಗೊಂಡ ನೀರಿನ ಟ್ಯಾಂಕ್; ಆತಂಕದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು

Advertisement
Advertisement

Udayavani is now on Telegram. Click here to join our channel and stay updated with the latest news.

Next