Advertisement

Heart attack: ಬಿದ್ಕಲ್ ಕಟ್ಟೆ; ಬಸ್ ಸ್ಟ್ಯಾಂಡ್ ಸಮೀಪ ಹೃದಯಾಘಾತದಿಂದ ವ್ಯಕ್ತಿ ಸಾವು

12:19 PM Oct 14, 2023 | Team Udayavani |

ತೆಕ್ಕಟ್ಟೆ: ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಿದ್ಕಲ್ ಕಟ್ಟೆ ಪ್ರಮುಖ ಭಾಗದ ಬಸ್ ಸ್ಟ್ಯಾಂಡ್ ಸಮೀಪ ಶನಿವಾರ(ಅ.14 ರಂದು) ನಡೆದಿದೆ.

Advertisement

ಮೃತರನ್ನು ಗುಡ್ಡೆಅಂಗಡಿ ಹಡ್ಕ‌ನಿವಾಸಿ ಶೀನ ದೇವಾಡಿಗ ಎಂದು ಗುರುತಿಸಲಾಗಿದೆ.

ಶೀನ ದೇವಾಡಿಗ ಅವರು ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ವಿಶ್ರಾಂತಿಗೆಂದು ಬಿದ್ಕಲ್ ಕಟ್ಟೆ ಪ್ರಮುಖ ಭಾಗದ ಬಸ್ ಸ್ಟ್ಯಾಂಡ್ ಸಮೀಪ ಕೂತಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ತತ್‌ ಕ್ಷಣವೇ ತುರ್ತು ಚಿಕಿತ್ಸೆ  ನೀಡಲು ಆಸ್ಪತ್ರೆಗೆ ರವಾನಿಸಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿದರಾದರೂ ಅಷ್ಟರಲ್ಲಿಯೇ ಅವರು ಅಸುನೀಗಿದ್ದರೆಂದು ತಿಳಿದು ಬಂದಿದೆ.

ಮಾನವೀಯತೆ ಮೆರೆದ ಸಾರ್ವಜನಿಕರು : ವೃತ್ತ ವ್ಯಕ್ತಿಯ ಶರ್ಟ್ ನಲ್ಲಿ ಆಧಾರ್ ಕಾರ್ಡ್ ನೋಡಿ ಗುರುತು ಪತ್ತೆ ಹಚ್ಚಿ, ಸಂಬಂಧಪಟ್ಟವರ ಗಮನಕ್ಕೆ ತಂದರು. ನಂತರ ಸ್ಥಳೀಯರಾದ ಸುಭಾಸ್ ಶೆಟ್ಟಿ ಹಾಗೂ ನಾಗರಾಜ್ ಶೆಟ್ಟಿ ಗಾವಳಿ ಅವರು ಮಾನವೀಯವಾಗಿ ಸ್ಪಂದಿಸಿ, ತನ್ನ ಸ್ವಂತ ವಾಹನದಲ್ಲಿಯೇ ಮೃತರ ಪಾರ್ಥಿವ ಶರೀರವನ್ನು ಕರೆದೊಯ್ಯುವ ಮೂಲಕ‌ ಮಾನವೀಯತೆ ಮೆರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next