Advertisement

ನಾಗರಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ

11:02 PM Dec 25, 2019 | Lakshmi GovindaRaj |

ಭದ್ರಾವತಿ: ನಾಗರ ಹಾವಿನ ಜೊತೆ ಸರಸ ಆಡಲು ಹೋದ ಯುವಕನೊಬ್ಬ ಅದರಿಂದ ತುಟಿಗೆ ಕಚ್ಚಿಸಿಕೊಂಡು ಪ್ರಾಣಕ್ಕೆ ಕುತ್ತು ತಂದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೊಸಮನೆ ತಮ್ಮಣ್ಣ ಕಾಲೋನಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ತಮ್ಮಣ್ಣ ಕಾಲೋನಿಯ ನಿವಾಸಿ ಸೋನು ಅಲಿಯಾಸ್‌ ರವಿ ಎಂಬಾತ ಮನೆಯ ಆವರಣದಲ್ಲಿದ್ದ ಹಾವಿಗೆ ಬಗ್ಗಿ ಅದರ ಬಾಯಿಗೆ ಮುತ್ತಿಡುವ ಸಾಹಸಕ್ಕೆ ಮುಂದಾದಾಗ ಆ ಹಾವು ಅವನ ತುಟಿಗೆ ಕಚ್ಚಿದೆ.

Advertisement

ಪರಿಣಾಮ ಆತನ ತುಟಿಯಿಂದ ರಕ್ತಸ್ರಾವ ಆಗುವುದರ ಜೊತೆಗೆ ತುಟಿ ಊದಿಕೊಂಡಿದೆ. ನಂತರ, ಯುವಕನ ಮನೆಯವರು ಆತನನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸೋನು ಹಾವಿಗೆ ಮುತ್ತಿಕ್ಕುವ ಹಾಗೂ ಅದು ಅವನ ತುಟಿಗೆ ಕಚ್ಚುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next