Advertisement

ಮತ್ತೂಂದು ಹಳ್ಳಿ ದತ್ತು ಪಡೆದ ಸಚಿನ್‌

03:35 AM Feb 15, 2017 | Team Udayavani |

ಮುಂಬಯಿ: ಕೇಂದ್ರ ಸರಕಾರದ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಕ್ರಿಕೆಟ್‌ ದಂತಕತೆ, ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಮತ್ತೂಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಇದರ ಅಭಿವೃದ್ಧಿಗಾಗಿ 4 ಕೋಟಿ ರೂ. ಘೋಷಿಸಿದ್ದಾರೆ. 

Advertisement

ಮಹಾರಾಷ್ಟ್ರದ ಒಸಾಮಾಬಾದ್‌ನ ದೊಂಜಾ, ಸಚಿನ್‌ ದತ್ತು ತೆಗೆದುಕೊಂಡಿರುವ ಹಳ್ಳಿಯಾಗಿದೆ. ಹೊಸ ಶಾಲಾ ಕೊಠಡಿ, ನೀರು ಸರಬರಾಜು, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹಣ ವಿನಿಯೋಗವಾಗಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಚಿನ್‌ ಆಂಧ್ರಪ್ರದೇಶದ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next