Advertisement

ಮಿಣಿಮಿಣಿ ಪೌಡರ್‌ ಹೇಳಿಕೆಗೆ ಎಚ್‌ಡಿಕೆ ಸ್ಪಷ್ಟನೆ

11:52 PM Jan 27, 2020 | Lakshmi GovindaRaj |

ಚನ್ನಪಟ್ಟಣ: “ಮಿಣಿಮಿಣಿ ಪೌಡರ್‌’ ಹೇಳಿಕೆ ವಿಚಾರದಲ್ಲಿ ನನ್ನ ವಿರುದ್ಧ ಬಿಜೆಪಿಯವರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅದು ಬಿಜೆಪಿಯವರ ಸಂಸ್ಕೃತಿ. ಅವರವರ ವಿಕೃತ ಮನೋಭಾವ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ಮಂಗಳೂರು ಬಾಂಬ್‌ ನ್ಪೋಟ ಪ್ರಕರಣ ಕುರಿತು ಪತ್ರಿಕೆಯಲ್ಲಿ ವರದಿಯಾಗಿದ್ದರ ಬಗ್ಗೆ ನಾನು ಮಿಣಿ ಮಿಣಿ ಪೌಡರ್‌ ಹೇಳಿಕೆ ನೀಡಿದ್ದೇನೆ. ಆ ವರದಿಯಲ್ಲಿ ಪಟಾಕಿಯಲ್ಲಿ ಬಳಸುವ ಮಿಣಿ ಮಿಣಿ ಪುಡಿ ಪೌಡರ್‌ ಎಂದು ಇತ್ತು.

ಆ ವರದಿ ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ. ಅದಕ್ಕೆ ದೊಡ್ಡಮಟ್ಟದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡಲಾಗಿದೆ. ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ತಪ್ಪು ಮಾಡದವನು. ತಪ್ಪು ಮಾಡಿದ್ರೆ ಮುಕ್ತವಾಗಿ ಹೇಳುವೆ.

ಅದರಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿರುವುದು ಬಿಜೆಪಿಯ ಅಭಿಮಾನಿಗಳೇ. ಬಾಂಬ್‌ ಪೌಡರ್‌ ಬಗ್ಗೆ ಕೆಲವು ಹಿರಿಯ ಅಧಿಕಾರಿಗಳೇ ಹೇಳಿಕೆ ನೀಡಿದ್ದಾರೆ. ಇದು ನಾನು ಕಥೆ ಕಟ್ಟಿದ್ದಲ್ಲ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆ ಮಾಡ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next