Advertisement

ಹಾಸನ: 4 ಪ್ರತ್ಯೇಕ ರಸ್ತೆ ಅಪಘಾತ: ನಾಲ್ವರ ಸಾವು

11:27 PM Jan 01, 2023 | Team Udayavani |

ಹಾಸನ: ಜಿಲ್ಲೆಯ ವಿವಿಧೆಡೆ ಸಂಭವಿಸಿದ 4 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

Advertisement

ಚನ್ನರಾಯಪಟ್ಟಣದ ವಿವೇಕನಗರ ವಾಸಿ ಮೂಲತಃ ತುಮಕೂರು ಜಿಲ್ಲೆ, ತುರುವೇಕೆರೆಯ ದಬ್ಬೆಘಟ್ಟ ಹೋಬಳಿಯ ತಂಡಗ ಗ್ರಾಮದ ಶಿಕ್ಷಕ ಟಿ.ಎನ್‌.ಮೋಹನ್‌ಕುಮಾರ್‌ (39) ಎಂಬವರ ಬೈಕ್‌ಗೆ ಚನ್ನರಾಯ ಪಟ್ಟಣದ ಹೌಸಿಂಗ್‌ ಬೋರ್ಡ್‌ ಸಮೀಪ ಲಾರಿ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೋಹನ್‌ ಕುಮಾರ್‌ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಮನಗರದ ಕನಕಪುರ ತಾಲೂಕು, ದೊಮ್ಮರದೊಡ್ಡಿ ಬೀದಿ ವಾಸಿ ಜಯಣ್ಣ (40)ಎಂಬವರ ದ್ವಿಚಕ್ರ ವಾಹನವು ಶ್ರವಣಬೆಳಗೊಳ ಹೋಬಳಿ ಹೊಸಳ್ಳಿ ಗ್ರಾಮದ ಸಮೀಪ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸವಾರ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿದ್ದಾರೆ.

ಆಲೂರು ಪಟ್ಟಣದ ಅಂಬೇಡ್ಕರ್‌ ನಗರದ ವಾಸಿ ಬ್ಯಾಂಕ್‌ ನೌಕರ, ಮೂಲತಃ ಪಾಳ್ಯ ಹೋಬಳಿ, ಮಡಬಲು ಗ್ರಾಮ ಸೋಮೇಶ್‌ (52)ಎಂಬವರ ಬೈಕ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದರು.

Advertisement

ಅರಕಲಗೂಡು ತಾಲೂಕು, ರಾಮನಾಥಪುರ ಹೋಬಳಿ ಬಸವಾಪಟ್ಟಣ ಗ್ರಾಮದ ಅರ್ಜುನ್‌ (30 )ಎಂಬವರ ಬೈಕ್‌ ನಾಯಿ ಅಡ್ಡ ಬಂದ ಪರಿಣಾಮ ಪಲ್ಟಿಯಾಗಿ ಅವರು ಮೃತಪಟ್ಟ ಘಟನೆ ಬೆಳವಾಡಿ ಗ್ರಾಮದಲ್ಲಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next