Advertisement

ಗದ್ದಿಗೆಯಲ್ಲಿ ಡಿ.24ಕ್ಕೆ ಹನುಮಂತೋತ್ಸವ: ಪೋಸ್ಟರ್ ಬಿಡುಗಡೆ ಮಾಡಿದ ಮುತಾಲಿಕ್

06:09 PM Dec 23, 2022 | Team Udayavani |

ಹುಣಸೂರು : ತಾಲೂಕಿನ ಇತಿಹಾಸ ಪ್ರಸಿದ್ದವಾಗಿರುವ ಶ್ರೀಕ್ಷೇತ್ರ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಡಿ.24 ರಂದು ನಡೆಯುವ ಹನುಮಂತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಮನವಿ ಮಾಡಿದರು.

Advertisement

ಹನುಮಂತೋತ್ಸವ ಮೆರವಣಿಗೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಹನುಮಂತ ದೇಶ ಭಕ್ತರ ಶಕ್ತಿಯ ಸಂಕೇತವಾಗಿದ್ದು. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಸಲುವಾಗಿ ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ಡಿ.24ರ ಶನಿವಾರ ಮಧ್ಯಾಹ್ನ3 ಗಂಟೆಗೆ ನಡೆಯುವ ಹನುಮಂತೋತ್ಸವ ಮೆರೆವಣಿಗೆಯಲ್ಲಿ ಹನುಮ ಭಕ್ತರು, ತಾಲೂಕಿನ ಹಿಂದೂಗಳು ಶ್ರೀರಾಮಸೇನೆಯ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ವೇಳೆ ಗದ್ದಿಗೆ ಹನುಮಂತೋತ್ಸವ ಸಮಿತಿಯ ಮುಖ್ಯಸ್ಥ ಚೇತನ್ ಕುಮಾರ್, ಶ್ರೀರಾಮಸೇನೆಯ ತಾಲೂಕು ಅಧ್ಯಕ್ಷ ಅನಿಲ್, ಮುಖಂಡ ಚಂದ್ರಮೌಳಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next