Advertisement

ಮಣಿಪಾಲದಲ್ಲಿ ಮೈದಳೆದ ಕರಕುಶಲ ಕಲೆ

04:52 PM Feb 22, 2017 | Team Udayavani |

ಉಡುಪಿ: ಮಣಿಪಾಲದ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ನಲ್ಲಿ ನಮ್ಮ ಅಂಗಡಿಯ ಪ್ರದರ್ಶನದ ಪೂರ್ವಭಾವಿಯಾಗಿ ಕರಕುಶಲ ಕಲೆಗಳ ತರಬೇತಿ ಶಿಬಿರ ನಡೆಯಿತು. ವಿದ್ಯಾರ್ಥಿಗಳು ತುಂಬು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಂಡರು. ಮಡಕೆ ಮಾಡುವುದು, ಮರದ ಕೆಲಸ, ತೆಂಗಿನಗರಿಯ ಕಸೂತಿ ಕಲೆ ಮೊದಲಾದವನ್ನು ಕಲಿಸಲಾಯಿತು. 

Advertisement

ಮಣಿಪಾಲ ವಿ.ವಿ. ಉಪಕುಲಸಚಿವ (ತಾಂತ್ರಿಕ) ಡಾ| ಚಂದ್ರಶೇಖರ ಎಸ್‌. ಅಡಿಗ ಮತ್ತು ಎಸ್‌ಒಸಿ ನಿರ್ದೇಶಕಿ ಡಾ|ನಂದಿನಿ ಲಕ್ಷ್ಮೀಕಾಂತ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ವಿವಿಧ ರೀತಿಯ ಕಲೆಗಳಲ್ಲಿ ತೊಡಗಿಕೊಂಡಾಗ ಕ್ರಿಯಾಶೀಲ, ಚಿಂತನಶೀಲ ಬದುಕು ರೂಪುಗೊಳ್ಳುತ್ತದೆ ಎಂದು ಡಾ| ಅಡಿಗ ತಿಳಿಸಿದರು. ನಮ್ಮ ಭೂಮಿಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರವನ್ನು ನಡೆಸಿ ಕೊಟ್ಟರು. ಸುಬ್ರಾಯ ಆಚಾರ್ಯರು ಮರದ ಕೆತ್ತನೆ, ಉದ್ಯಮಿ ಜಗದೀಶ, ಕುಂಭಕಲಾವಿದ ರಘುರಾಮ ಕುಲಾಲ್‌ ಕುಂಭಕಲೆ ಕುರಿತು, ಕೃಷ್ಣ ಪೂಜಾರಿಯವರು ಕೃಷಿ ಕುರಿತು ಮಾಹಿತಿ ನೀಡಿದರು. 

ದಿನವಿಡೀ ಎಸ್‌ಒಸಿ ಕ್ಯಾಂಪಸ್‌ನಲ್ಲಿ ಕರಕುಶಲ ಕಲೆಯ ಚಟುವಟಿಕೆ ನಡೆಯಿತು. ಒಂದು ಸಂಪನ್ಮೂಲದ ಕಚ್ಚಾ ಸಾಮಗ್ರಿಯಿಂದ ಕ್ರಿಯಾಶೀಲ ಚಿಂತನೆಯೊಂದಿಗೆ ಇನ್ನೊಂದು ವಸ್ತುವನ್ನು ತಯಾರಿಸಬಹುದು ಎಂಬುದನ್ನು ತರಬೇತಿದಾರರು ತಿಳಿಸಿ ಕೊಟ್ಟರು. ಐದು ವರ್ಷದಿಂದ 65 ವರ್ಷದವರೆಗಿನ ವಿವಿಧ ವಯೋಮಾನದ ಪ್ರತಿನಿಧಿಗಳು ಪಾಲ್ಗೊಂಡರು. ಮರದ ಕೆತ್ತನೆಯಿಂದ ವಿಮಾನ, ಕೀ ಗೊಂಚಲು, ಕೀ ಹೋಲ್ಡರ್‌, ಪೆಟ್ಟಿಗೆ, ಕತ್ತಿ, ಶೀಲ್ಡ್‌ಗಳನ್ನು ತಯಾರಿಸಲಾಯಿತು. ತೆಂಗಿನ ಓಲಿಗಳಿಂದ ಹಕ್ಕಿ, ಮೀನು, ಹೊಲಿದ ಬುಟ್ಟಿ ಮೊದಲಾದವನ್ನು ತಯಾರಿಸಲಾಯಿತು. ಕುಂಭಕಲೆಯಲ್ಲಿ ಗಣೇಶ, ಶಿವಲಿಂಗ ಆಕೃತಿಗಳು, ವಿವಿಧ ರೀತಿಯ ಮಡಕೆಗಳು ರೂಪುಗೊಂಡವು. ಭಾರತೀಯ ಕರಕುಶಲಕಲೆಗಳ ಬಗೆಗೆ ಇರುವ ಆಸಕ್ತಿ ತರಬೇತಿಯಲ್ಲಿ ಅನಾವರಣಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next