Advertisement

ರೇಣುಗೆ ಕೈ ತಪ್ಪಿದ ಸಚಿವ ಸ್ಥಾನ; ಹಳದಮ್ಮದೇವಿ ಪ್ರಸಾದ ವೈರಲ್‌!

04:55 PM Aug 07, 2021 | Team Udayavani |

ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಲಭಿಸುವುದಿಲ್ಲ ಎಂದು ತಾಲೂಕಿನ ಮಾರಿಕೊಪ್ಪ ಗ್ರಾಮದ
ಗ್ರಾಮ ದೇವತೆ ಹಾಗೂ ಹೊನ್ನಾಳಿ ಹಿರೇಕಲ್ಮಠದ ಚನ್ನಪ್ಪಸ್ವಾಮಿ ಅವರ ಸಹೋದರಿ ಹಳದಮ್ಮದೇವಿ ಪ್ರಸಾದ ಕೊಟ್ಟಿರುವ ವಿಷಯ ಈಗ ಅಂತರಜಾಲದಲ್ಲಿ ವೈರಲ್‌ ಆಗಿದೆ.

Advertisement

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ದೊರಕುವ ಬಗ್ಗೆ ರೇಣುಕಾಚಾರ್ಯ
ಅಭಿಮಾನಿಗಳು, ಕಾರ್ಯಕರ್ತರು ಕಳೆದ ವಾರ ಹಳದಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದಾದರೆ ಬಲಗಡೆ ಹೂ ಕೊಡು, ಸಚಿವ ಸ್ಥಾನ ದೊರೆಯದಿದ್ದರೆ ಎಡಗಡೆ ಹೂ ಕೊಡು ತಾಯಿ ಎಂದು ಬೇಡಿಕೊಂಡಾಗ ಎಡಗಡೆ ಹೂಗಳು ಉದರಿದ್ದವು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕಂಚು ಗೆದ್ದ ಕುಸ್ತಿಪಟು ಭಜರಂಗ್ ಪೂನಿಯಾ

ಮಾರಿಕೊಪ್ಪ ಗ್ರಾಮದ ಹಳದಮ್ಮದೇವಿ ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೇವಿ. ಭಕ್ತರ ಇಷ್ಟಾರ್ಥ ಸಿದ್ಧಿಸುವ ದೇವಿ ಎಂದು ಪ್ರಖ್ಯಾತಿ ಇದೆ. ಕಾಕತಾಳಿಯವೋ ಏನೋ ಎಂಬಂತೆ ಬಿಎಸ್‌ವೈ ಆಪ್ತರಾಗಿದ್ದ ರೇಣುಕಾಚಾರ್ಯ ಅವರಿಗೆ ಈ ಬಾರಿ ಸಚಿವ ಸ್ಥಾನ ಗ್ಯಾರಂಟಿ ಎಂಬ ಮಾತು ಸುಳ್ಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next