Advertisement

ಎಚ್‌ಎಎಲ್‌ ರಸ್ತೆ ಫ‌ುಟ್‌ಪಾತ್‌ ಒತ್ತುವರಿ ಮುಕ್ತ

06:15 AM Feb 02, 2019 | |

ಬೆಂಗಳೂರು: ಮಹದೇವಪುರ ವಲಯದ ಎಚ್‌ಎಎಲ್‌ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಪಾಲಿಕೆ ಅಧಿಕಾರಿಗಳು, 18 ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.

Advertisement

ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರ ಆದೇಶದಂತೆ ಈಗಾಗಲೇ ನಗರದಾದ್ಯಂತ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಶುಕ್ರವಾರ ಎಚ್‌ಎಎಲ್‌ ರಸ್ತೆಯ ಸುಮಾರು 2 ಕಿ.ಮೀ. ಮಾರ್ಗದಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹಳೆ ವಿಮಾನ ನಿಲ್ದಾಣ ರಸ್ತೆಯ ಹೆಲಿಕಾಪ್ಟರ್‌ ವಿಭಾಗದಿಂದ ಯಮಲೂರು ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿ ಒತ್ತುವರಿ ತೆರವು ಮಾಡಲಾಗಿದೆ. ಫ‌ುಟ್‌ಪಾತ್‌ನಲ್ಲಿ ಮತ್ತೆ ವ್ಯಾಪಾರ ನಡೆಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next