Advertisement

ಪಾಕಿಸ್ಥಾನದಲ್ಲಿ ಶುಕ್ರವಾರದ ಭಾಷಣ: ಉಗ್ರ ಸಯೀದ್‌ಗೆ ಸರಕಾರದ ನಿಷೇಧ

06:04 AM Mar 08, 2019 | Team Udayavani |

ಲಾಹೋರ್‌ : ಇಲ್ಲಿನ ಜಮಾದ್‌ ಉದ್‌ ದಾವಾ ಪ್ರಧಾನ ಕಾರ್ಯಾಲಯದ ಕಾದ್‌ಸಿಯಾ ಜಾಮಿಯಾ ಮಸೀದಿಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂದು ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಉಪನ್ಯಾಸ ಮಾಡದಂತೆ ಉಗ್ರ ಹಾಫೀಜ್‌ ಸಯೀದ್‌ಗೆ ನಿಷೇಧ ಹೇರಲಾಗಿದೆ.

Advertisement

ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಾಫೀಜ್‌ ಸಯೀದ್‌ ಗೆ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಲಾಹೋರ್‌ನಲ್ಲಿರುವ ಜೆಯುಡಿ ಪ್ರಧಾನ ಕಾರ್ಯಾಲಯದ ಮಸೀದಿಯಲ್ಲಿ ಇಂದು ಶುಕ್ರವಾರ ಭಾಷಣ ಮಾಡದಂತೆ ಪಾಕ್‌ ಸರಕಾರ ಇದೇ ಮೊದಲ ಬಾರಿಗೆ ನಿಷೇಧಿಸಿರುವುದು ಅಚ್ಚರಿಯ ವಿದ್ಯಮಾನವೆಂದು ತಿಳಿಯಲಾಗಿದೆ. 

ಕಾದ್‌ಸಿಯಾ ಮಸೀದಿ ಪಂಬಾಜ್‌ ಸರಕಾರದ ನಿಯಂತ್ರಣದಲ್ಲಿರುವ ಹೊರತಾಗಿಯೂ ಈ ವರೆಗೂ ಹಾಫಿಜ್‌ ಸಯೀದ್‌ಗೆ ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಭಾಷಣ ಮಾಡದಂತೆ ನಿರ್ಬಂಧಿಸಿರಲಿಲ್ಲ. 

ಭಾರತ – ಪಾಕ್‌ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕೆಂಬ ಅಂತಾರಾಷ್ಟ್ರೀಯ ಒತ್ತಡ ಪಾಕ್‌ ಸರಕಾರದ ಮೇಲೆ ಹೆಚ್ಚುತ್ತಿರುವ ಕಾರಣ ಪಂಜಾಬ್‌ ಸರಕಾರ ಕಾದ್‌ಸಿಯಾ ಜಾಮೀಯಾ ಮಸೀದಿಯನ್ನು ಸೀಲ್‌ ಮಾಡಿದ್ದು, ಹಾಫೀಜ್‌ ಸಯೀದ್‌ ಇಂದು ಶುಕ್ರವಾರ ಭಾಷಣ ಮಾಡುವುದನ್ನು ನಿಷೇಧಿಸಿದೆ ಎಂದು ಪಂಜಾಬ್‌ ಸರಕಾರದ ಹಿರಿಯ ಅಧಿಕಾರಿಯೋರ್ವರು ಪಿಟಿಐ ಗೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next