Advertisement

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

07:25 AM Oct 18, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಆನಂದಾನು ಭವ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅಧಿಕ ಲಾಭ. ಷೇರು ಹೂಡಿಕೆಯಲ್ಲಿ ಲಾಭ. ದೇವತಾ ಕಾರ್ಯಗಳಲ್ಲಿ ಮಗ್ನತೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯದ ಆನಂದ.

Advertisement

ವೃಷಭ: ಎಲ್ಲ ಕಾರ್ಯಕ್ಷೇತ್ರಗಳಲ್ಲೂ ತಡೆಯಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಶೀಘ್ರವಾಗಿ ಕಾರ್ಯ ಮುಗಿಸುವ ಆತುರ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರೋತ್ಸಾಹ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳು ಯಶಸ್ವಿ. ನ್ಯಾಯಕ್ಕಾಗಿ ಹೋರಾಟದಲ್ಲಿ ಜಯ. ಹಿರಿಯರೊಂದಿಗೆ ಸಣ್ಣ ತಿರುಗಾಟ. ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಿ.

ಕರ್ಕಾಟಕ: ಉದ್ಯೋಗಸ್ಥಾನದಲ್ಲಿ ವಿಶಿಷ್ಟ ಪ್ರಯೋಗಗಳು ಆರಂಭ. ಉದ್ಯಮಗಳಲ್ಲಿ ಮಾಲಕರು ಮತ್ತು ನೌಕರರ ನಡುವೆ ಆಪ್ತ ಸಂಬಂಧ. ವೈವಾಹಿಕ ಸಂಬಂಧ ಕುದುರಿಸಲು ಪ್ರಯಾಣ. ಗೃಹೋದ್ಯಮಗಳ ಸ್ಥಿತಿ ಸುಧಾರಣೆ.

ಸಿಂಹ: ಸರಕಾರಿ ನೌಕರರಿಗೆ ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆಯ ಆತಂಕ. ಉದ್ಯಮಿಗಳಿಗೆ ಅನುಕೂಲ. ಸ್ವೋದ್ಯೋಗಿ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು.

Advertisement

ಕನ್ಯಾ: ಅವಧಿಗೆ ಮೊದಲೇ ಕೆಲಸ ಮುಗಿಸಿದ ತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಿವಾಹಾಸಕ್ತರಿಗೆ ಸಂಬಂಧ ಕೂಡಿ ಬರುವ ಲಕ್ಷಣ. ಸಂಸಾರದಲ್ಲಿ ಸಾಮರಸ್ಯ.

ತುಲಾ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸಣ್ಣ ಉದ್ಯಮ ಘಟಕಗಳ ವಿಸ್ತರಣೆ. ಉದ್ಯೋಗ ಅನ್ವೇಷಣೆ ಫ‌ಲಪ್ರದ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.

ವೃಶ್ಚಿಕ: ಸಾಂಸಾರಿಕ ಜೀವನದಲ್ಲಿ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅವಿವಾಹಿತ ಕನ್ಯೆಯರಿಗೆ ಶೀಘ್ರ ವಿವಾಹ ಯೋಗ.

ಧನು: ಸ್ಥಿರವಾದ ವರಮಾನ ಮೂಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಮಂದಗತಿಯ ಕಾರ್ಯ. ಕೃಷ್ಯುತ್ಪನ್ನಗಳು, ಹಣ್ಣು ತರಕಾರಿ ಮಾರಾಟ ದಿಂದ ಲಾಭ. ದೂರದ ಬಂಧುಗಳಿಂದ ಶುಭ ಸಮಾಚಾರ.

ಮಕರ: ಸಮಯಕ್ಕೆ ಸರಿಯಾಗಿ ಕಾರ್ಯ ಗಳು ಮುಗಿದ ಸಮಾಧಾನ. ಕಟ್ಟಡ ನಿರ್ಮಾಪಕರಿಗೆ ಕಾರ್ಯ ಮುಗಿಸುವ ತರಾತುರಿ. ವಿದ್ಯುತ್‌ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಬಂಧುಗಳೊಂದಿಗೆ ವೈಮನಸ್ಯ ಪರಿಹಾರ.

ಕುಂಭ: ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ವಾಹನ ಬಿಡಿಭಾಗಗಳಿಂದ ಅಧಿಕ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ಬೆಳವಣಿಗೆ. ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಮನೆಯಲ್ಲಿ ಶುಭಕಾರ್ಯಕ್ಕೆ ಮುನ್ನುಡಿ.

ಮೀನ: ಆಯೋಜಿತ ಯೋಜನೆಗಳ ತ್ವರಿತ ಜಾರಿ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಸಮಯಕ್ಕೆ ಸರಿಯಾದ ಸೇವೆ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗಟ್ಟಿ ನಿರ್ಧಾರ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ಹರ್ಷ.

Advertisement

Udayavani is now on Telegram. Click here to join our channel and stay updated with the latest news.

Next