Advertisement

ಗುತ್ತಿಗಾರು: ಮಳೆ ನೀರಿನಿಂದ ಆವೃತವಾದ ರಸ್ತೆ; ಸಂಚಾರಕ್ಕೆಅಡಚಣೆ

03:26 PM Mar 17, 2017 | Team Udayavani |

ಸುಬ್ರಹ್ಮಣ್ಯ: ಬುಧವಾರ ಸಂಜೆ ಸುರಿದ ಮಳೆಯಿಂದ ಗುತ್ತಿಗಾರು ಕಮಿಲ ಬಳ್ಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. 

Advertisement

ಮಳೆಯಿಂದ ದೇವಸ್ಯ ಎಂಬಲ್ಲಿ ರಸ್ತೆಗೆ ಮಣ್ಣು ಬಂದು ಕೆಸರುಮಯವಾಯಿತು. ಕಮಿಲದಲ್ಲಿ  ಸೇತುವೆಯ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳೀಯರಾದ ಶಿವಕುಮಾರ್‌, ಜಯರಾಮ ಸೇರಿದಂತೆ ಇತರರು ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಈ ಭಾಗದ ರಸ್ತೆ ತೀರ ಹದೆಗೆಟ್ಟಿದ್ದು, ದುರಸ್ತಿಗಾಗಿ ಹಲವಾರು ಬಾರಿ ಜನ ಪ್ರತಿನಿಧಿಗಳಿಗೆ ಮತ್ತು ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಕೆಲವೆಡೆ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿದ್ದು ಸಂಚಾರಕ್ಕೆ ಅಯೋಗ್ಯ ವಾಗಿದೆ. ರಸ್ತೆ ಮಧ್ಯೆ ದೊಡ್ಡ ಗಾತ್ರದ ಹೊಂಡಗಳಾಗಿದ್ದು ಮಳೆ ನೀರು ಅದರಲ್ಲಿ ಶೇಖರಣೆಗೊಂಡು ವಾಹನ ಸವಾರರು ಸಂಚರಿಸಲು ಪರದಾಡಬೇಕಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next