Advertisement

ಕಾಡಂಚಿನ ಜನರ ಸುತ್ತ ಕೃಷ್ಣಪ್ಪ ಉಪ್ಪೂರು ನಿರ್ದೇಶನದ ‘ಗುರ್ಬಿ’

12:19 PM Dec 24, 2021 | Team Udayavani |

ಕಮರ್ಷಿಯಲ್‌ ಸಿನಿಮಾಗಳ ನಡುವೆ ಇಂದು ಕಲಾತ್ಮಕ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಅದು “ಗುರ್ಬಿ’. ಕೃಷ್ಣಪ್ಪ ಉಪ್ಪೂರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಹಿಂದೆ “ಮಹಾನದಿ’ ಎಂಬ ಸಿನಿಮಾ ಮಾಡಿದ್ದ ಕೃಷ್ಣಪ್ಪ ಅವರು ಈ ಬಾರಿ “ಗುರ್ಬಿ’ ಮೂಲಕ ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗದ ಹೆಣ್ಣಿನ ಬದುಕಿನ ಸುತ್ತ ಸಾಗುವ ಕಥೆಯನ್ನು ಈ ಬಾರಿ “ಗುರ್ಬಿ’ಯಲ್ಲಿ ತೋರಿಸಲು ಹೊರಟಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಕೃಷ್ಣಪ್ಪ ಉಪ್ಪೂರು, “ಗುರ್ಬಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾಡಿ ನಂಚಿನಲ್ಲಿ ವಾಸಿಸುತ್ತಿರುವ ಗುಡ್ಡಗಾಡು ಜನಾಂಗದವರ ಬದುಕು-ಬವಣೆ ಸುತ್ತ ಹೆಣೆಯಲಾಗಿದೆ. ಬಡಪಾಯಿ ಜನಾಂಗ ಮತ್ತು ಅಲ್ಲಿನ ಜನರನ್ನು ಮೇಲ್ವರ್ಗದವರು ಹೇಗೆ ಶೋಷಣೆ ಮಾಡುತ್ತಾ, ಅವರ ಬಾಳಲ್ಲಿ ಹೇಗೆಲ್ಲಾ ಚೆಲ್ಲಾಟವಾಡುತ್ತಿದ್ದಾರೆ ಎಂಬ ಅಂಶವನ್ನು ಇಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಇಂದಿನ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಿದೆ. ಬಡವರ ಸ್ಥಿತಿಗತಿಯ ಕುರಿತು ಬೆಳಕು ಚೆಲ್ಲುವ ಪ್ರಯ ತ್ನ ವನ್ನು ಇಲ್ಲಿ ಮಾಡಲಾಗಿದೆ’ ಎನ್ನುತ್ತಾರೆ.

ಇದನ್ನೂ ಓದಿ: ಆ್ಯಕ್ಷನ್‌ ಅರ್ಜುನ್‌ ಗೌಡ ಡಿ.31ರಂದು ರಿಲೀಸ್‌

ಚಿತ್ರದಲ್ಲಿ ಅಶ್ವಿ‌ತಾ, ಕೀರ್ತಿರಾಜ್‌, ಮಂಡ್ಯ ರಮೇಶ್‌, ಜೀವನ್‌ ರಾಮ್‌ ಸುಳ್ಯ, ರವಿರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.ಚಿತ್ರಕ್ಕೆ ವೀನಸ್‌ ಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ

Advertisement

Udayavani is now on Telegram. Click here to join our channel and stay updated with the latest news.

Next