Advertisement

ಶ್ರೀಲಂಕಾ ತಂಡದಿಂದ ಗುಣರತ್ನೆ ಹೊರಕ್ಕೆ

06:05 AM Feb 16, 2018 | |

ಕೊಲಂಬೋ: ಬಲಗೈ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾ ತಂಡದ ಆಲ್‌ರೌಂಡರ್‌ ಅಸೇಲ ಗುಣರತ್ನೆ ಬಾಂಗ್ಲದೇಶ ವಿರುದ್ಧ ನಡೆಯಲಿರುವ ಟಿ20 ತ್ರಿಕೋನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಫೀಲ್ಡಿಂಗ್‌ ಅಭ್ಯಾಸದ ವೇಳೆ ಡೈವ್‌ ಹೊಡೆಯುವಾಗ ಕೈಗೆ ಗಾಯ ಮಾಡಿಕೊಂಡಿದ್ದರು.

Advertisement

ಗುಣರತ್ನೆ ಕೊಲಂಬೋಗೆ ಮರಳುವ ಮುನ್ನ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ. ಗುಣರತ್ನೆ ಗೈರು ಕ್ರೀಲಂಕಾ ತಂಡಕ್ಕೆ ಭಾರೀ ಹೊಡೆತ ನೀಡಿದೆ. ಇನ್ನೊಬ್ಬ ಬ್ಯಾಟ್ಸ್‌ಮನ್‌ ಕುಸಲ್‌ ಪೆರೆರ ಕೂಡ ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದಾರೆ. ಏಂಜೆಲೊ ಮ್ಯಾಥ್ಯೂಸ್‌ ಅವರೂ ತಂಡದಿಂದ ಹೊರಬಿದ್ದಿರುವುದರಿಂದ ಲಂಕಾ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆರೆರ ಸ್ಥಾನಕ್ಕೆ ಕುಸಲ್‌ ಮೆಂಡಿಸ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next