Advertisement

ಜನಾದೇಶ ಒಪ್ಪಿದ್ದೇವೆ;ಚುನಾವಣೆ ನ್ಯಾಯಬದ್ಧ, ಮುಕ್ತ: ಕಾಂಗ್ರೆಸ್‌

07:30 PM Dec 18, 2017 | Team Udayavani |

ಅಹ್ಮದಾಬಾದ್‌ : ಗುಜರಾತ್‌ ಚುನಾವಣೆಯಲ್ಲಿ ಆಳುವ ಬಜೆಪಿ ಬಹುಮತವನ್ನು  ಗಳಿಸಿರುವಂತೆಯೇ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ  ಭರತ್‌ಸಿಂಗ್‌ ಸೋಳಂಕಿ ಅವರು “ಪಕ್ಷವು ಜನಾದೇಶವನ್ನು ಒಪ್ಪಿಕೊಂಡಿದೆ ಮತ್ತು ಈ ಸೋಲಿಗೆ ನಾನು ಹೊಣೆ ವಹಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

ಚುನಾವಣಾ ಆಯೋಗದ ಮೇಲೆ ಪೂರ್ಣ ವಿಶ್ವಾಸ ಪ್ರಕಟಿಸಿರುವ ಸೋಳಂಕಿ, “ಚುನಾವಣೆಗಳು ನ್ಯಾಯಬದ್ಧ ಮತ್ತು ನ್ಯಾಯೋಚಿತವಾಗಿ ನಡೆದಿವೆ; ಆದರೂ ವಿದ್ಯುನ್ಮಾನ ಮತಯಂತ್ರಗಳು ಕೆಲವೆಡೆಗಳಲ್ಲಿ ಕೈಕೊಟ್ಟ ಬಗೆಗೆ ಎತ್ತಲಾಗಿರುವ ಪ್ರಶ್ನೆಗಳನ್ನು, ಸಂದೇಹಗಳನ್ನು ಚುನಾವಣಾ ಆಯೋಗ ಪರಿಹರಿಸಬೇಕು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸ ಅಚಲವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದಾರೆ. 

ಬಿಜೆಪಿ ತಾನು ಈ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿತ್ತು. ಆದರೆ ಅದು ಕಳೆದ 22 ವರ್ಷಗಳಲ್ಲೇ ಅತ್ಯಂತ ಕಡಿಮೆ ಸ್ಥಾನಗಳನ್ನು (99) ಗೆದ್ದಿದೆ ಎಂದು ಸೋಳಂಕಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next