Advertisement

ಜಿಎಸ್‌ಬಿ ಬಾಲಾಜಿ ಮಂದಿರ: ಪೊಲೀಸ್‌ ಅಧಿಕಾರಿಗೆ ಗೌರವ

12:17 PM Jun 29, 2018 | Team Udayavani |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯವರ ಬಾಲಾಜಿ ಮಂದಿರಕ್ಕೆ ವಸಾಯಿಯ  ಮಾಣಿಕ್‌ಪುರ ಪೊಲೀಸ್‌ ಸ್ಟೇಷನ್‌ನ ಹಿರಿಯ ಪೊಲೀಸ್‌ ಇನ್ಸ್‌ ಪೆಕ್ಟರ್‌ ದಾಮೋದರ ವಸಂತ ಬಾಂದೇಕರ್‌ ಅವರು ಭೇಟಿ ನೀಡಿದರು.

Advertisement

ವಾಲೀವ್‌ ಪೊಲೀಸ್‌ ಠಾಣೆಯಿಂದ ವರ್ಗಾವಣೆಗೊಂಡಿರುವ ವಸಂತ ಬಾಂದೇಕರ್‌ ಅವರು ಮಾಣಿಕ್‌ಪುರ ಪೊಲೀಸ್‌ ಠಾಣೆಯ ಮುಖ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರನ್ನು  ಸಮಿತಿಯ ವತಿಯಿಂದ ಅಧ್ಯಕ್ಷ ತಾರನಾಥ ಪೈ ಅವರ ಹಸ್ತದಿಂದ ಫಲಪುಷ್ಪ, ಬಾಲಾಜಿ ವಿಗ್ರಹ ಹಾಗೂ ಪ್ರಸಾದವನ್ನಿತ್ತು ಗೌರವಿಸಲಾಯಿತು.  ವಿರಾರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಲಕ್ಷಿ¾à ಬೋರ್ಕರ್‌, ಥಾಣೆ ಪೊಲೀಸ್‌ ಸ್ಟೇಷನ್‌ನ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ರೇಖಾ ಲೋಂಡೆ ಅವರು ಉಪಸ್ಥಿತರಿದ್ದರು. ಎಲ್ಲ ಅಧಿಕಾರಿಗಳನ್ನು   ಗಿರಿಧರ ಭಟ್‌  ಪ್ರಸಾದವನ್ನಿತ್ತು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next