Advertisement

ಅರಕಲಗೂಡು: 35 ಗ್ರಾಪಂಗೆ ಶೇ.86.63 ಮತದಾನ

04:16 PM Dec 23, 2020 | Suhan S |

ಅರಕಲಗೂಡು: ತಾಲೂಕಿನಲ್ಲಿ 35 ಗ್ರಾಪಂಗಳ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು, ಶೇ.846.63 ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮದ ಮತಗಟ್ಟೆಯ ಹೊರಭಾಗದಲ್ಲಿ ಪೊಲೀಸ್‌ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು ಹೊರತುಪಡಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.

Advertisement

ಸೋಂಕಿತರಿಗೆ ಮತದಾನಕ್ಕೆ ಅವಕಾಶ: ತಾಲೂಕಿನಲ್ಲಿ ಕೋವಿಡ್ ಸೋಂಕು ದೃಢಪಟ್ಟ 15 ಮಂದಿಗೆ ಸಂಜೆ 4ರಿಂದ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರತಿ ಸೋಂಕಿತರಿಗೂ ಪಿಪಿಇ ಕಿಟ್‌ಹಾಕಿಸಿ ಮತಗಟ್ಟೆಗೆ ಕರೆತಂದು,ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲೂ ಕೋವಿಡ್‌-19 ಪರೀಕ್ಷಿಸಿ, ಸ್ಯಾನಿಟೈಸರ್‌ ನೀಡುವ ಮೂಲಕ ಪ್ರತಿ ಮತದಾರನಿಗೂ ಮಾಸ್ಕ್ ಕಡ್ಡಾಯವಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಕಂಡು ಬಂದಿತ್ತು.

ಚಿನ್ನ ಬೆಳ್ಳಿ, ಹಣ, ಕೋಳಿ ಹಂಚಿಕೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಸೋಮವಾರ ರಾತ್ರಿ ಚಿನ್ನ ಬೆಳ್ಳಿಯ ವಸ್ತುಗಳನ್ನು ನೀಡಿ ಮತಯಾಚಿಸಿದರೆ, ಇನ್ನೂ ಕೆಲವುಕಡೆ ಒಂದು ಮತಕ್ಕೆ ಸಾವಿರ ರೂ.ನಿಂದ 5 ಸಾವಿರ ರೂ.ವರೆಗೂ ನೀಡಲಾಗಿದೆ.

ಮತಗಟ್ಟೆಗಳ ಸುತ್ತ ವಾಮಾಚಾರ :  ಅರಕಲಗೂಡು ತಾಲೂಕಿನ ಹುಲ್ಲಂಗಾಲದ ಮತಗಟ್ಟೆಯ ಸುತ್ತ ಸೋಮವಾರ ಕುಡಿಕೆ, ನಿಂಬೆಹಣ್ಣು, ಚಪ್ಪಲಿ, ಅರಿಶಿಣ ಕುಂಕುಮ ನೆಲದಲ್ಲಿ ಹೂತು ಗ್ರಾಮಸ್ಥರಿಗೆಭಯಹುಟ್ಟಿಸಿದ ಪ್ರಸಂಗ ಮಾಸುವ ಮುನ್ನವೇ, ಮಂಗಳವಾರ ಮಲ್ಲಿಪಟ್ಟಣಹೋಬಳಿ ಎಚ್‌ ಆರ್‌ಪಿ ಕಾಲೋನಿ ಮತ್ತು ಚೌರಗಲ್ಲು ಗ್ರಾಮದ ರಸ್ತೆ ಮಧ್ಯೆಯಲ್ಲಿ ವಾಮಾಚಾರ

ಕುಡಿಕೆಯೊಳಗೆ ಮೂವರು ಅಭ್ಯರ್ಥಿಗಳ ಭಿತ್ತಿಪತ್ರಗಳ ಜೊತೆಗೆ ಕೋಳಿ ತಲೆ, ಹಂದಿಮುಳ್ಳು, ಪ್ರಾಣಿಗಳ ಹಲ್ಲು ಇನ್ನು ಇತರೆ ಸಾಮಗ್ರಿಗಳನ್ನು ಇಟ್ಟು ವಾಮಾಚಾರ ನಡೆಸಲಾಗಿದೆ.

Advertisement

ಪಿಎಸ್‌ಐ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ : 

ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಯಲ್ಲಿಮತಗಟ್ಟೆಯ ಬಳಿ ಅಭ್ಯರ್ಥಿ ಸಾಗರ ಮತ್ತು ಇತರರು ಮತದಾರರಿಗೆ ಮದ್ಯ,ಊಟವನ್ನು ಹಂಚುತ್ತಿದ್ದಾರೆ ಎಂಬ ವಿಷಯ ತಿಳಿದ ಪಿಎಸ್‌ಐ, ಸ್ಥಳಕ್ಕೆ ತೆರಳಿ ಮತಗಟ್ಟೆಯ ಸುತ್ತಮುತ್ತ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ, ಮದ್ಯ, ಊಟ ಹಂಚದಂತೆ, ಇಲ್ಲಿಂದ ತೆರಳುವಂತೆ ಗದರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿ ಸಾಗರ ಮತ್ತು ಇತರರು ಪಿಎಸ್‌ಐಅಜಯಕುಮಾರ ಅವರ ಬಟ್ಟೆ ಹಿಡಿದು ಎಳೆದಾಡಿ, ಪೊಲೀಸ್‌ ಜೀಪಿಗೆ ಬೆಂಕಿ ಹಚ್ಚುವುದಾಗಿ ತಿಳಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಸ್ಥಿತಿ ತಲೆದೂರಿದ್ದರಿಂದ ಸ್ಥಳದಿಂದ ಹೊರಬರಲು ಯತ್ನಿಸಿದಾಗ, ಪೊಲೀಸ್‌ ಜೀಪಿಗೆ ಅಡ್ಡ ಕುಳಿತು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರಿಂದ 30 ಜನರ ಮೇಲೆ ನೀತಿಸಂಹಿತೆ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕೊಣನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಸಿಪಿಐ ಸತ್ಯನಾರಾಯಣ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next