Advertisement

ಗ್ರಾ.ಪಂ. ಸದಸ್ಯನ ಬರ್ಬರ ಹತ್ಯೆ

12:25 AM Feb 20, 2019 | |

ಪಾಂಡವಪುರ: ಗ್ರಾಮ ದೇವತೆ ಉತ್ಸವದಲ್ಲಿ ಹಳೇ ದ್ವೇಷದಿಂದ ಹೊಂಚು ಹಾಕುತ್ತಿದ್ದ ಕುಟುಂಬವೊಂದು ಚಿಕ್ಕಾಡೆ ಗ್ರಾ. ಪಂ. ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ನಾಲ್ವರನ್ನು ಗಂಭೀರ ಗಾಯಗೊಳಿಸಿರುವ ಘಟನೆ ಸೋಮವಾರ ತಡರಾತ್ರಿ ಚಿಕ್ಕಾಡೆಯಲ್ಲಿ ನಡೆದಿದೆ. 

Advertisement

ಚಿಕ್ಕಾಡೆ ಗ್ರಾ. ಪಂ. ಸದಸ್ಯ ತಿಮ್ಮೇಗೌಡ (50) ಕೊಲೆಯಾದವರು.  ಅದೇ ಗ್ರಾಮದ ಪಾಪೇಗೌಡರ ಮಕ್ಕಳಾದ ದೇವೇಗೌಡ ಅಲಿಯಾಸ್‌ ಆನಂದ, ಯೋಗೇಗೌಡ, ಕುಮಾರ, ಯೋಗೇಗೌಡನ ಮಗ ಮದನ ಮತ್ತು ಸಂಬಂಧಿ ಬೋರೆ ಆನಂದೂರು ಗ್ರಾಮದ ಚಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಚಿವ ಪುಟ್ಟರಾಜು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next