Advertisement

ಉದ್ಯಾವರ ಗ್ರಾಮ ಪಂಚಾಯತಿಗೆ ಬೀಗ ಜಡಿದು ಸಾರ್ವಜನಿಕರ ಆಕ್ರೋಶ

05:07 PM Feb 19, 2021 | Team Udayavani |

ಕಟಪಾಡಿ: ಸಾರ್ವಜನಿಕರಿಂದ  ಉದ್ಯಾವರ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ (ಫೆ.19) ನಡೆದಿದೆ.

Advertisement

ಸಾರ್ವಜನಿಕರ, ಗ್ರಾಮಸಭೆಯ, ಪಂಚಾಯತಿ ಸಭೆಗಳ, ನಿರ್ಣಯಕ್ಕೂ ಮೀರಿ ಸಾರ್ವಜನಿಕ ವಿರೋಧಿ ಹಾಗೂ ಪರಿಸರಕ್ಕೆ ಮಾರಕವಾದ ಉದ್ಯಮಗಳಿಗೆ ಆಡಳಿತಾಧಿಕಾರಿ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಸಾರ್ವಜನಿಕರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಕಾಟಿಪಳ್ಳ:ರೌಡಿಶೀಟರ್ ಪಿಂಕಿ ನವಾಝ್ ಕೊಲೆಯತ್ನ ಪ್ರಕರಣ ; 9 ಮಂದಿ ಸೆರೆ

ಆಡಳಿತಾರೂಢ ಸದಸ್ಯರ ಗಮನಕ್ಕೂ ತಾರದೆ ಏಕಾಏಕಿಯಾಗಿ ಪರವಾನಿಗೆ ನೀಡಿರುವುದನ್ನು ವಿರೋಧಿಸಿದ ಹಾಲಿ ನೂತನ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಸಾರ್ವಜನಿಕರ ನಿರ್ಧಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸುವ ವರೆಗೆ ಗ್ರಾಮ ಪಂಚಾಯತ್ ಕಚೇರಿ ತೆರೆಯಲು ಅವಕಾಶ ಇಲ್ಲ. ಈ ವಿಚಾರದಲ್ಲಿ ರಾಜೀನಾಮೆ ಕೊಡಲು ಸಿದ್ಧ ಎಂದು ತಿಳಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next