Advertisement

500 ಕೋಟಿ ರೂ. ಪರಿಹಾರ ಕೊಡಿ: ಅಣ್ಣಾಮಲೈಗೆ DMK ಕಾನೂನು ನೋಟಿಸ್‌!

10:47 PM Apr 16, 2023 | Team Udayavani |

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಡಿಎಂಕೆ ಕಾನೂನು ನೋಟಿಸ್‌ ನೀಡಿದ್ದು, ಅದರಲ್ಲಿ 500 ಕೋಟಿ ರೂ. ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದೆ. ಜತೆಗೆ ಕ್ಷಮೆ ಯಾಚಿಸುವಂತೆ ಕೂಡ ಆಗ್ರಹಿಸಿದೆ. ಕೆಲ ದಿನಗಳ ಹಿಂದೆ ತಮಿಳುನಾಡು ಸಿಎಂ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ಡಿಎಂಕೆ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

“ಡಿಎಂಕೆ ಫೈಲ್ಸ್‌’ ಹೆಸರಿನಲ್ಲಿ ಎಂ.ಕೆ.ಸ್ಟಾಲಿನ್‌ ಅವರನ್ನು ಗುರಿಯಾಗಿಸಿಕೊಂಡು “200 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ” ಎಂದು ಅಣ್ಣಾಮಲೈ ಆರೋಪಿಸಿದ್ದರು. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌.ಭಾರತಿ ಅವರ ಸೂಚನೆ ಮೇರೆಗೆ ಹಿರಿಯ ನ್ಯಾಯವಾದಿ, ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್‌ ಅವರು ಅಣ್ಣಾಮಲೈ ಅವರಿಗೆ 10 ಪುಟಗಳ ನೋಟಿಸ್‌ ನೀಡಿದ್ದಾರೆ.

“ತಮ್ಮ 56 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಂ.ಕೆ.ಸ್ಟಾಲಿನ್‌ ಅವರು ಯಾವುದೇ ವ್ಯಕ್ತಿಯಿಂದ ಅಕ್ರಮವಾಗಿ ಒಂದು ಪೈಸೆಯನ್ನೂ ಪಡೆದಿಲ್ಲ. ಆರೋಪಗಳ ಕುರಿತು ಅಣ್ಣಾಮಲೈ ಅವರು ಭೇಷರತ್‌ ಕ್ಷಮೆಯಾಚಿಸಬೇಕು. ಅಲ್ಲದೇ ಆರೋಪಗಳ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಮತ್ತು ವೆಬ್‌ಸೈಟ್‌ನಿಂದ ಡಿಲೀಟ್‌ ಮಾಡಬೇಕು,’ ಎಂದು ಆರ್‌.ಎಸ್‌.ಭಾರತಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next