Advertisement

ಸರ್ಕಾರ ಸುಭದ್ರವಾಗಿದೆ:ವೇಣುಗೋಪಾಲ್‌

06:40 AM Sep 16, 2018 | Team Udayavani |

ಬೆಂಗಳೂರು: ಬಿಜೆಪಿಯವರು ಅಧಿಕಾರ ದಾಹದಿಂದ ರಾಜ್ಯದಲ್ಲಿ ರಾಜಕೀಯ  ಅಸ್ಥಿರತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಕಾನೂನು ಬಾಹಿರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.

Advertisement

ಪಕ್ಷದ ನಾಯಕರ ಸಭೆ ನಂತರ ಮಾತನಾಡಿದ ಅವರು, ನಾವು ಕೇವಲ ಪಕ್ಷದ ಸಂಘಟನೆ ಕುರಿತು ಚರ್ಚೆ ಮಾಡಿದ್ದೇವೆ. ನಾವು ರಾಜಕೀಯದಲ್ಲಿ ನೈತಿಕತೆ ಇಟ್ಟುಕೊಂಡಿದ್ದೇವೆ. ಬಿಜೆಪಿ ಅನೈತಿಕ ರಾಜಕೀಯದ ಹಾದಿಯ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ. ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗುತ್ತಿದೆ. ಈ ಬಗ್ಗೆ ನಮ್ಮ ಶಾಸಕರು ನಮಗೆ ದೂರು ನೀಡಿದ್ದಾರೆ. ಅಧಿಕಾರ ಇಲ್ಲದೇ ಬಿಜೆಪಿ ನಾಯಕರು ಹತಾಶರಾಗಿದ್ದು, ಸಮ್ಮಿಶ್ರ ಸರ್ಕಾರ ಸ್ಥಿàರವಾಗಿಲ್ಲ ಎನ್ನುವುದನ್ನು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ.

ನಮ್ಮ ಸಮ್ಮಿಶ್ರ ಸರ್ಕಾರ ಈಗ ನೂರು ದಿನ ಪೂರೈಸಿದೆ. ನಮ್ಮ ಶಾಸಕರು ಬಿಜೆಪಿಯ ಆಮಿಷವನ್ನು ತಿರಸ್ಕರಿಸಿದ್ದಾರೆ. ಜೆಡಿಎಸ್‌ ಕಾಂಗ್ರೆಸ್‌ ಸರ್ಕಾರ ಐದು ವರ್ಷ ಯಶಸ್ವಿಯಾಗಿ ಪೂರೈಸಲಿದ್ದು, ನಿರೀಕ್ಷೆಯಂತೆ ಶೀಘ್ರವೇ ಸಂಪುಟ ವಿಸ್ತರಣೆಯೂ ನಡೆಯುತ್ತದೆ ಎಂದು ವೇಣುಗೋಪಾಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next