Advertisement

ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದವನ ಸೆರೆ

10:00 AM Feb 26, 2022 | Team Udayavani |

ಬೆಂಗಳೂರು: ಚಿನ್ನಾಭರಣ ಮಳಿಗೆಯಿಂದ ಆಭರಣ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ತೆಗೆದುಕೊಂಡು ಹೋಗಿ ಆಭರಣ ಮಾಡಿಕೊಡದೆ ವಂಚಿಸಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಆತನಿಂದ 50 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಜಯನಗರದ ಅಮರ್‌ ಮೊಹಂತ್‌ (33) ಬಂಧಿತ. ಜಯನಗರದ 3ನೇ ಬ್ಲಾಕ್‌ನಲ್ಲಿರುವ ತಿರುಮಲ ಜ್ಯುವೆಲ್ಲರ್ಸ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಭರಣ ತಯಾರಿಕನಾಗಿ ಅಮರ್‌ ಕೆಲಸ ಮಾಡಿಕೊಂಡಿದ್ದ. ಜು.1ರಂದು ಒಡವೆಗಳನ್ನು ಮಾಡಿಕೊಡುವುದಾಗಿ ಜ್ಯುವೆಲ್ಲರ್ಸ್‌ನಿಂದ 1,304 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿ ನಂತರ ನಾಪತ್ತೆಯಾಗಿದ್ದ.

ಕರೆ ಮಾಡಿದರೆ, ಅನಾರೋಗ್ಯದ ಸಬೂಬು ಹೇಳುತ್ತಿದ್ದವನೇ ಹೊರತು ಚಿನ್ನವನ್ನು ಮಾತ್ರ ವಾಪಸ್‌ ನೀಡಿರಲಿಲ್ಲ. ಇದರಿಂದ ಆತಂಕಗೊಂಡ ಒಡವೆ ಅಂಗಡಿ ಮಾಲೀಕ ಮನೀಶ್‌, ಆತನ ರೂಂಗೆ ಹೋದಾಗ ರೂಂ ಖಾಲಿ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು. ಮನೀಶ್‌ ಈ ಬಗ್ಗೆ ಜಯನಗರ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಾಂತ್ರಿಕವಾಗಿ ತನಿಖೆ ನಡೆಸಿದಾಗ ಆರೋಪಿ ರಾಜಸ್ಥಾನದಲ್ಲಿ ಇರುವುದು ಪತ್ತೆಯಾಗಿತ್ತು. ಅಲ್ಲಿಗೆ ತೆರಳಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ, ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next