Advertisement

ಮಹಾಬಲೇಶ್ವರ ದೇಗುಲದಲ್ಲಿ ಚಿನ್ನಾಭರಣ ಕಳವು

11:32 AM Jan 20, 2018 | Team Udayavani |

ಕೆ.ಆರ್‌.ಪುರ: ಇತಿಹಾಸ ಪ್ರಸಿದ್ಧ ಮಹಾಬಲೇಶ್ವರ ಸ್ವಾಮಿ ದೇವಾಲಯದ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂ ಚಿನ್ನಾ¸‌ರಣ, ನಗದು ದೋಚಿರುವ ಘಟನೆ ಕೆಆರ್‌ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ವೆಂಗಯ್ಯನ ಕೆರೆ ಸಮೀಪವಿರುವ ಮುಜರಾಯಿ ಇಲಾಖೆಗೆ ಸೇರಿದ ಮಹಾಬಲೇಶ್ವರ ಸ್ವಾಮಿ ದೇಗುಲದಲ್ಲಿ ಈ ಘಟನೆ ಜರುಗಿದ್ದು, 6ಕೆಜಿ ತೂಕದ 2 ಬೆಳ್ಳಿ ಮುಖವಾಡ, ನಾಗಾಭರಣಕ್ಕೆ ಜೋಡಿಸಿರುವ 2 ಮುಖವಾಡ, ಪಾರ್ವತಿ ದೇವಿಯ ಬಂಗಾರದ ಮಾಂಗಲ್ಯ ಸರ  ಹಾಗೂ ಹುಂಡಿ ಸಮೇತ ಕಳವು ಮಾಡಿದ್ದಾರೆ ಎಂದು ಅರ್ಚಕ ವೆಂಕಟೇಶ್‌ ತಿಳಿಸಿದರು.

ರಾತ್ರಿ 8.30ಕ್ಕೆ ಪೂಜೆ ಮುಗಿದ ನಂತರ ದೇಗುಲಕ್ಕೆ ಬೀಗ ಹಾಕಲಾಗಿತ್ತು, ಮುಜರಾಯಿ ಇಲಾಖೆಯಿಂದ ನೇಮಕಗೊಂಡಿರುವ ಭದ್ರತಾ ಸಿಬ್ಬಂದಿ ರಾತ್ರಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದ ದುಷ್ಕರ್ಮಿಗಳ ಕಳ್ಳತನ ಮಾಡಿದ್ದಾರೆ. ಎಂದಿನಂತೆ ಅರ್ಚಕರು ಬೆಳಗ್ಗೆ ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.  ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next