Advertisement

ಮೋದಿ ಜೀ, ಗೋದ್ರಾ ಹಿಂಸೆಗೆ ನೀವೇ ಕಾರಣ ಎನ್ನಬಹುದೇ ? ಕ್ಯಾಪ್ಟನ್‌ ಅಮರೀಂದರ್‌

09:17 AM May 12, 2019 | Team Udayavani |

ಪಟಿಯಾಲಾ : ‘2002ರಲ್ಲಿ ನಡೆದಿದ್ದ ಗುಜರಾತ್‌ನ ಗೋದ್ರಾ ದೊಂಬಿಗೂ ನಿಮಗೂ ನಂಟಿದೆ ಎಂದು ಯಾರಾದಾರೂ ಆರೋಪಿಸಿದರೆ ನೀವೇನು ಹೇಳುವಿರಿ?’ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

Advertisement

1984ರ ಸಿಕ್ಖ್ ವಿರೋಧಿ ಹಿಂಸೆಗೆ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮರೀಂದರ್‌ ಸಿಂಗ್‌  ಈ ಪ್ರಶ್ನೆಯನ್ನು ನೇರವಾಗಿ ಎಸೆದರು.

“1984ರ ಸಿಕ್ಖ್ ವಿರೋಧಿ ಹಿಂಸೆಗೆ ಮಾಜಿ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ ಕಾರಣರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸುವುದು ತಪ್ಪು. ಇದು ಸರಿ ಎಂದಾದರೆ ಗೋದ್ರಾ ಹಿಂಸೆಗೆ ಮೋದಿಯೇ ಕಾರಣ ಎಂದು ಹೇಳುವುದು ಕೂಡ ಸರಿಯಾದೀತು’ ಎಂದು ಅಮರೀಂದರ್‌ ಸಿಂಗ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಪ್ರಧಾನಿ ಮೋದಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ; ಈ ರೀತಿಯ ವರ್ತನೆ ದೇಶದ ಪ್ರಧಾನಿಗೆ ತಕ್ಕುದಲ್ಲ’ ಎಂದು ಅಮರೀಂದರ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next