Advertisement

ದೇವರು ಸೃಷ್ಟಿಸಿದ ಸರ್ಕಾರ,ಅವನೇ ಕಾಪಾಡ್ತಾನೆ

06:20 AM Jun 28, 2018 | Team Udayavani |

ರಾಯಚೂರು: “ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಐದು ವರ್ಷ ನಡೆಯದು ಎಂದಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ. ಅಂಥ ಯಾವುದೇ ಬೆಳವಣಿಗೆಗಳು ನಡೆದಿಲ್ಲ’ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಇದು ದೇವರೇ ಸೃಷ್ಟಿಸಿದ ಸರ್ಕಾರ ಎಂದು ಭಾವಿಸಿದ್ದೇವೆ. ಐದು ವರ್ಷ ಸಂಪೂರ್ಣ ಅಧಿಕಾರ ನಡೆಸುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಆರ್ಥಿಕ ತಜ್ಞರಾಗಿದ್ದು, ಅಭಿಪ್ರಾಯ ಹೇಳುವ ಹಕ್ಕಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡಿಸಲು ಕೆಲ ಶಾಸಕರು ಹೋದ ಮಾತ್ರಕ್ಕೆ ಬಂಡಾಯ, ಅತೃಪ್ತಿ ಎಂಬುದು ಸರಿಯಲ್ಲ. ಸರ್ಕಾರ ಕೆಡವಲು ಯತ್ನ ನಡೆದಿದೆ ಎಂಬುದೆಲ್ಲ ಊಹಾಪೋಹ. ಇನ್ನೈದು ವರ್ಷ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ’ ಎಂದರು. ರೈತರ ಸಾಲಮನ್ನಾಕ್ಕೆ ಸರ್ಕಾರ ಈಗಲೂ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next