Advertisement

ಆಡಿನ ಮಾಲೀಕತ್ವಕ್ಕಾಗಿ ಇಬ್ಬರ ನಡುವೆ ಜಗಳ… ಹಬ್ಬಕ್ಕೆ ಬಲಿಯಾಗಬೇಕಿದ್ದ ಆಡು ಬಚಾವ್

07:42 PM Jul 01, 2023 | Team Udayavani |

ಭೋಪಾಲ್‌: ಇಬ್ಬರ ಜಗಳದಿಂದ ಮೂರನೇಯವನಿಗೆ ಲಾಭ ಎನ್ನುವಂತೆ ಮಧ್ಯಪ್ರದೇಶದಲ್ಲಿ ಮಾಲೀಕರಿಬ್ಬರ ಜಗಳದಲ್ಲಿ ಹಬ್ಬಕ್ಕೆ ಬಲಿಯಾಗಬೇಕಿದ್ದ ಆಡೊಂದು, ಲಾಭ ಪಡೆದು ಬಚಾವ್‌ ಆಗಿ, ಜೀವ ಉಳಿಸಿಕೊಂಡಿರುವ ಘಟನೆ ವರದಿಯಾಗಿದೆ.

Advertisement

ರೇವಾ ಜಿಲ್ಲೆಯ ನಿವಾಸಿಗಳಾದ ಸಂಜಯ್‌ ಖಾನ್‌ ಹಾಗೂ ಶಾರುಖ್‌ ಖಾನ್‌ ಎಂಬ ಇಬ್ಬರು ಒಂದೇ ಆಡಿಗಾಗಿ ಜಗಳವಾಡಿದ್ದಾರೆ. ಪೊಲೀಸರ ಪ್ರಕಾರ, ಸಂಜಯ್‌ ಎಂಬವರು ಆಡು ಒಂದನ್ನು ಖರೀದಿಸಿದ್ದು, 6 ತಿಂಗಳ ಹಿಂದೆ ಅದು ಕಳೆದುಹೋಗಿದೆ. ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಅದೇ ಆಡು ಈಗ ಶಾರುಖ್‌ ಅವರ ಬಳಿ ಇದೆ ಎನ್ನುತ್ತಿದ್ದಾರೆ. ಅದೇ ರೀತಿ, ಶಾರುಖ್‌ ಅವರು ಕೆಲ ದಿನಗಳ ಹಿಂದಷ್ಟೇ ಈ ಆಡನ್ನು 15,000 ರೂ.ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಆಡಿನ ಮಾಲೀಕತ್ವಕ್ಕೆ ಇಬ್ಬರೂ ಜಗಳವಾಡಿದ್ದಾರೆ.

ಬಕ್ರೀದ್‌ ಹಬ್ಬದ ದಿನ ಸಂಜೆಯೇ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಅದಕ್ಕಾಗಿ ಸ್ಥಳೀಯ ಕಾರ್ಪೊರೇಟರ್‌ ಮಧ್ಯಸ್ಥಿಕೆಯನ್ನೂ ವಹಿಸಿದ್ದರು. ಅಂತಿಮವಾಗಿ ಸಂಜಯ್‌ ಬಳಿಯಲ್ಲಿ ಆಡು ಇರಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಸದ್ಯ ಆಡು ತನಿಖೆಯ ಭಾಗವಾಗಿದ್ದು, ಅದಕ್ಕೆ ಹಾನಿ ಮಾಡಬಾರದು ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಅಧಿಕಾರಿಗಳ ಕಾಲಹರಣ: ಹಂಪಿ ಮಾಸ್ಟರ್‌ಪ್ಲಾನ್ ವಿಳಂಬ, ಫಾರ್ಮ್ ಸ್ಟೇ ಪರವಾನಿಗೆಗೂ ತಡೆ

Advertisement

Udayavani is now on Telegram. Click here to join our channel and stay updated with the latest news.

Next