Advertisement

ನೀತಿ ಸಂಹಿತೆ ತೆರವಾದಾಗ ಖಾತೆ ಭಾರ ಇಳಿಸಲಿದ್ದಾರೆ ಗೋವಾ ಸಿಎಂ ಪ್ರಮೋದ್‌ ಸಾವಂತ್‌

09:06 AM May 11, 2019 | Team Udayavani |

ಪಣಜಿ: ಈ ತಿಂಗಳಾಂತ್ಯದಲ್ಲಿ ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ತೆರವುಗೊಂಡಾಗ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ತಮ್ಮಲ್ಲಿರುವ ಖಾತೆಗಳ ಭಾರವನ್ನು ಕಡಿಮೆ ಮಾಡಿಕೊಳ್ಳಲು ಅವುಗಳನ್ನು ತನ್ನ ಸಹೋದ್ಯೋಗಿಗಳಿಗೆ ಹಂಚಲಿದ್ದಾರೆ.

Advertisement

ಲೋಕಸಭಾ ಚುನಾವಣೆ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧವಾಗಿ ಗೋವೆಯಲ್ಲಿ ಚುನಾವಣಾ ನೀತಿ ಸಂಹಿತೆಯು ಕಳೆದ ಮಾರ್ಚ್‌ 10ರಿಂದ ಜಾರಿಯಲ್ಲಿದೆ. ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಇದೇ ಮೇ 19ರಂದು ನಡೆಯಲಿದೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯು ಬಹುತೇಕ ಮೇ 27ರಂದು ತೆರವುಗೊಳ್ಳಲಿದ್ದು ಆ ಬಳಿಕ ರಾಜ್ಯದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ದೊರಕಲಿದೆ ಎಂದು ಸಿಎಂ ಸಾವಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next