Advertisement

ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರ ಗೋವಾವನ್ನು ಅಪರಾಧಗಳ ಕೇಂದ್ರವನ್ನಾಗಿ ಮಾಡಿದೆ: ಕಾಂಗ್ರೆಸ್

12:10 PM Sep 02, 2021 | Team Udayavani |

ಪಣಜಿ : ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸರ್ಕಾರ ಗೋವಾದಲ್ಲಿ ಅಪರಾಧಗಳ ಕೇಂದ್ರವನ್ನಾಗಿ ಮಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮುಖ್ಯಮಂತ್ರಿ ಸಾವಂತ್ ಅವರು ಅಧಿಕಾರದಲ್ಲಿರುವ ಅರ್ಹತೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ  ಬಿಜೆಪಿ ಸರ್ಕಾರವನ್ನು ವಜಾ ಗೊಳಿಸಬೇಕು ಎಂದು ರಾಜ್ಯ ಕಾಂಗ್ರೇಸ್ ನಿಯೋಗ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ರವರ ಬಳಿ ಮನವಿ ಮಾಡಿದೆ.

Advertisement

ಇದನ್ನೂ ಓದಿ : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಗೋ ಹತ್ಯೆಗೆ ಕಠಿಣ ಶಿಕ್ಷೆ; ಅಲಹಾಬಾದ್ ಹೈಕೋರ್ಟ್

ಕಾಂಗ್ರೇಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ವಿರೋಧ ಪಕ್ಷದ್ ನಾಯಕ ದಿಗಂಬರ್ ಕಾಮತ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಂದಾಗಿ ರಾಜ್ಯದ ಜನತೆಯ ಮನದಲ್ಲಿ ಭಯದ ವಾತಾವರಣ ಮೂಡುವಂತಾಗಿದೆ.

ಪ್ರತಿದಿನ ಬಲಾತ್ಕಾರ, ಅಪಹರಣ, ಗ್ಯಾಂಗ್ ವಾರ್, ಇಂತಹ ಘಟನೆ ನಡೆಯುತ್ತಿದೆ. ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ರಾಜ್ಯದಲ್ಲಿ ಖಾಯ್ದೆ ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರ ಬಳಿ ಕಾಂಗ್ರೇಸ್ ಮನವಿ ಮಾಡಿದೆ.

ಇದನ್ನೂ ಓದಿ : 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎರಡೇ ಶೌಚಾಲಯ | ಅನೈತಿಕ ಚಟುವಟಿಕೆಗಳ ತಾಣವಾಗಿರುವ ಶಾಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next