Advertisement

Gnanavapi: ಜ್ಞಾನವಾಪಿ ನೆಲ ಮಹಡಿ ಸಮೀಕ್ಷೆ ಬೇಡಿಕೆ: 15ರಿಂದ ವಿಚಾರಣೆ

12:05 AM Feb 07, 2024 | Team Udayavani |

ಲಕ್ನೋ: ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲ ಮಹ ಡಿಯ ಬಗ್ಗೆ ಕೂಡ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮೂಲಕ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ಫೆ.15ರಿಂದ ವಿಚಾರಣೆ ನಡೆಯಲಿದೆ. ಈ ಬಗ್ಗೆ ವಾರಾಣಸಿಯ ಜಿಲ್ಲಾ ಕೋರ್ಟ್‌ ಮಂಗಳವಾರ ತೀರ್ಮಾನ ಪ್ರಕಟಿಸಿದ್ದಾರೆ.

Advertisement

ಹಿಂದೂಗಳ ಪರ ವಕೀಲ ಮದನ್‌ ಮೋಹನ್‌ ಯಾದವ್‌ ಮಾತನಾಡಿ ಜ್ಞಾನವಾಪಿ ಮಸೀದಿಯ ನೆಲಮಹಡಿ ಯಲ್ಲಿ ರಹಸ್ಯ ಕೊಠಡಿಗಳು ಇವೆ. ಅವುಗಳ ಬಗ್ಗೆಯೂ ಸಮೀಕ್ಷೆ ನಡೆಸಬೇ ಕಾಗಿದೆ ಎಂದು ಅವರು ವಾದಿಸಿದ್ದಾರೆ. ಹೀಗಾಗಿ, ನಮ್ಮ ಅರ್ಜಿಯನ್ನು ಜಿಲ್ಲಾ ಕೋರ್ಟ್‌ ಪರಿಗಣಿಸಿದ್ದು, ಫೆ.15ರಂದು ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.

ಹೈಕೋರ್ಟಲ್ಲಿ ವಿಚಾರಣೆ: ನಡುವೆ, ನೆಲಮಹಡಿಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ದ್ದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ಅಲ ಹಾಬಾದ್‌ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡಸಲಾಯಿತು. ಮಸೀದಿ ಆಡಳಿತ ಮಂಡಳಿ ವಕೀಲರು ವಾದ ಮಂಡಿಸಿ ಜಿಲ್ಲಾ ನ್ಯಾಯಾಲಯವು ತರಾತುರಿಯಲ್ಲಿ ಆದೇಶ ನೀಡಿದೆ ಎಂದರು. ಹಿಂದೂ ಅರ್ಜಿದಾರರ ಪರವಾಗಿ ವಿಷ್ಣು ಶಂಕರ್‌ ಜೈನ್‌ ಅವರು ಕೋರ್ಟ್‌ಗೆ ಸಲ್ಲಿಕೆಗಳನ್ನು ನೀಡಿದ್ದು, ಜಿಲ್ಲಾ ನ್ಯಾಯಾಲಯವು ಜ. 17 ‌ರಂದೇ ರಿಸೀವರ್‌ ನೇಮಕಕ್ಕೆ ಆದೇಶ ನೀಡಲಾಗಿತ್ತು. ಬಳಿಕ ಜ.31ರಂದು ತೀರ್ಪು ನೀಡಲಾಗಿದೆ. ಇದು ತರಾತುರಿಯ ನಿರ್ಣಯವಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next